ಕಡಬ: ಕುಟ್ರುಪಾಡಿ ಗ್ರಾಮದ ಹೊಸಮಠ ಉಳಿಪ್ಪು ರಸ್ತೆ ದುರಸ್ತಿ ಕೆಲಸವನ್ನು ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಗೋಗಟೆ ಅವರ ನೇತೃತ್ವದಲ್ಲಿ ಶ್ರಮದಾನದ ಮೂಲಕ ನಡೆಸಲಾಯಿತು.
ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್. ಕರುಣಾಕರ ಗೋಗಟೆ, ನಿರ್ದೇಶಕ ಶಶಾಂಕ್ ಗೋಖಲೆ ಮಾರ್ಗದಮನೆ,ಹೊಸಮಠ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕಿರಣ್ ಗೋಗಟೆ, ಪ್ರಮುಖರಾದ ಮೋನಪ್ಪ ಗೌಡ ನಾಡೋಳಿ, ಕಾಶಿನಾಥ್ ಗೋಗಟೆ, ವಿಶ್ವನಾಥ ಗೌಡ ಉಳಿಪ್ಪು, ಸಂದರ ಗೌಡ, ದಿನೇಶ್ ನಾಡೋಳಿ, ಸುರೇಶ್ ಉಳಿಪ್ಪು, ದೇಜಪ್ಪ ಗೌಡ, ಹಿರಿಯಣ್ಣ ಗೌಡ, ಶಿವರಾಮ ಗೌಡ ಉಳಿಪ್ಪು, ಮಹೇಶ್ ಉಳಿಪ್ಪು, ಭರತ್ ಉಳಿಪ್ಪು, ಶ್ರೀಧರ ಗೌಡ ಉಳಿಪ್ಪು, ಅಚ್ಚುತ್ತ ಗೌಡ ಉಳಿಪ್ಪು, ಡೊಂಬಯ್ಯ ಗೌಡ ಉಳಿಪ್ಪು, ನಿತಿನ್ ಕೈಮಜಲು, ನವೀಶ್ ಉಳಿಪ್ಪು, ಸ್ವಸ್ಥಕ್ ಉಳಿಪ್ಪು, ಪ್ರಶಾಂತ್ ಉಳಿಪ್ಪು, ಬಿಪಿನ್ ಉಳಿಪ್ಪು, ಜಗನ್ನಾಥ ನಾಡೋಳಿ, ಹರೀಶ್ ನಾಡೋಳಿ, ಗುಂಡ ರಾಣ್ಯ ಮೊದಲಾದವರು ಭಾಗವಹಿಸಿದ್ದರು.