ವಿಟ್ಲ: ರಾಜ್ಯದಲ್ಲಿ ಜು.16ರಿಂದ ಲಾಕ್ ಡೌನ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ವಿಟ್ಲ ಪೇಟೆಯಲ್ಲಿ ಜನರು ಅಗತ್ಯ ಸಾಮಗ್ರಿ ಖರೀದಿಸಲು ಮುಗಿ ಬಿಳುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬಂತು.
ಜಿಲ್ಲಾಡಳಿತ ಈಗಾಗಲೇ ಜು.16ರಿಂದ ದ.ಕ ಜಿಲ್ಲೆಯಲ್ಲಿ ಎರಡನೇ ಹಂತದ ಲಾಕ್ ಡೌನ್ ಗೆ ಕರೆ ನೀಡಿದೆ. ಜು.14ರಂದು ಹಾಗೂ ಜು.15ರಂದು ಸಾಮಗ್ರಿ ಖರೀದಿಸಲು ಸಾರ್ವಜನಿಕರಿಗೆ ಅವಕಾಶ ನೀಡಿದ್ದರಿಂದ ವಿಟ್ಲ ಪೇಟೆಯಲ್ಲಿ ಜನದಟ್ಟಣೆ ಉಂಟಾಗಿದೆ. ದಿನಸಿ, ಮೆಡಿಕಲ್, ತರಕಾರಿ ಅಂಗಡಿಗಳ ಮುಂಭಾಗ ಜನರು ಸರತಿ ಸಾಲಿನಲ್ಲಿ ನಿಂತು ಸಾಮಗ್ರಿ ಖರೀದಿಸಿದರು. ಇನ್ನೂ ವಿಟ್ಲದ ಪ್ರಮುಖ ಬ್ಯಾಂಕ್ ನಲ್ಲಿಯೂ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ವಿಟ್ಲ ಸುತ್ತಮುತ್ತಲಿನ ಗ್ರಾಮದ ಜನರು ಒಮ್ಮೆಗೆ ಪೇಟೆಗೆ ಆಗಮಿಸಿರುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಉಂಟಾಗಿದೆ. ವಿಟ್ಲ ಠಾಣಾ ಪೊಲೀಸರು ಜನರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ.