ಉಪ್ಪಿನಂಗಡಿ: ಉಪ್ಪಿನಂಗಡಿ ಸಬ್ ಸ್ಟೇಷನ್ ವ್ಯಾಪ್ತಿಯ ಹಿರೇಬಂಡಾಡಿ ಕ್ಯಾಂಪ್ನಲ್ಲಿ ಲೈನ್ಮೆನ್ (ಪವರ್ ಮೆನ್) ಆಗಿರುವ ಶಿವಾನಂದ (೫೫ ವ.) ಜ. ೭ರಂದು ಬೆಳಿಗ್ಗೆ ಸುಳ್ಯದಲ್ಲಿ ತನ್ನ ವಾಸದ ಮನೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಶಿವಾನಂದರವರು ಪುತ್ತೂರು ಉರ್ಲಾಂಡಿ ನಿವಾಸಿ ಆಗಿದ್ದು, ಇವರ ಪತ್ನಿ ಗೀತಾ ಸುಳ್ಯದಲ್ಲಿ ಕೆ.ವಿ.ಜಿ. ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗದಲ್ಲಿದ್ದು, ಹೀಗಾಗಿ ಇವರು ಸುಳ್ಯದಲ್ಲಿ ಬಾಡಿಕೆ ಮನೆ ಮಾಡಿಕೊಂಡಿದ್ದು, ದಿನಂಪ್ರತಿ ಉಪ್ಪಿನಂಗಡಿಗೆ ಬಂದು ಹೋಗುತ್ತಿದ್ದರು. ಕೆಲ ಸಮಯದ ಹಿಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ನ. ೬ರಂದು ಕರ್ತವ್ಯ ನಿರ್ವಹಿಸಿದ್ದರು. ಜ. ೭ರಂದು ಬೆಳಿಗ್ಗೆ ಎದೆನೋವು ಕಾಣಿಸಿಕೊಂಡು ಹಠಾತ್ ಕುಸಿದು ಬಿದ್ದು ಮೃತಪಟ್ಟರೆನ್ನಲಾಗಿದೆ. ಶಿವಾನಂದವರು ೧೯೮೮ರಲ್ಲಿ ಪುತ್ತೂರುನಲ್ಲಿ ಮೆಸ್ಕಾಂನಲ್ಲಿ ಸೇವೆಗೆ ನೇಮಕಾತಿ ಹೊಂದಿ ಆ ಬಳಿಕ ಅದೇ ವರ್ಷದಲ್ಲಿ ಉಪ್ಪಿನಂಗಡಿ ಮೆಸ್ಕಾಂ ಸಬ್ ಸ್ಟೇಷನ್ಗೆ ವರ್ಗಾವಣೆ ಹೊಂದಿ ಕರ್ತವ್ಯದಲ್ಲಿ ನಿರತರಾಗಿದ್ದರು. ಕಳೆದ ೩೨ ವರ್ಷಗಳಿಂದ ಉಪ್ಪಿನಂಗಡಿ ಮೆಸ್ಕಾಂ ಸಬ್ಸ್ಟೇಷನ್ನಲ್ಲಿ ಲೈನ್ಮೆನ್ ಆಗಿ ಸೇವೆಯಲ್ಲಿದ್ದು, ಶಿವಣ್ಣ ಎಂದೇ ಚಿರಪರಿಚಿತರಾಗಿದ್ದರು. ಮೃತ ಶಿವಾನಂದರವರು ಪತ್ನಿ ಗೀತಾ, ಪುತ್ರರಾದ ಯಶಸ್ವಿನ್ ಮತ್ತು ತೇಜಸ್ವಿನ್ರನ್ನು ಅಗಲಿದ್ದಾರೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.