ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಉನ್ನತ ವಿದ್ವಾಂಸರಾಗಿ ಶೈಕ್ಷಣಿಕ ರಂಗದಲ್ಲಿ ಮಹೋನ್ನತ ಪಾತ್ರವಹಿಸಿ, ಧಾರ್ಮಿಕ ಸಾಮಾಜಿಕ ರಂಗದಲ್ಲಿ ನಾನಾ ರೀತಿಯ ಕೊಡುಗೆಯನ್ನು ನೀಡಿದ ಜಿಲ್ಲೆಯ ಉನ್ನತ ಖಾಝಿಗಳಾಗಿದ್ದ ಶೈಖುನಾ ಕೋಟ ಉಸ್ತಾದ್ ಶಹೀದೇ ಮಿಲ್ಲತ್ ಸಿಎಂ ಉಸ್ತಾದ್ ಇವರ ಜೀವನ ಚರಿತ್ರೆ ಕೃತಿ ಬಿಡುಗಡೆ, ಸೆಮಿನಾರ್ ಅನುಸ್ಮರಣೆ ಕಾರ್ಯಕ್ರಮ ಜ.೮ರಂದು ಪಾಣೆಮಂಗಳೂರು ಸಮೀಪ ನೆಹರುನಗರ ಮಸೀದಿ ವಠಾರದಲ್ಲಿ ನಡೆಯಲಿದೆ.
ಮಹಾ ಸಾಧಕರಾಗಿದ್ದ ಮಹಾನುಭಾವರು ಖಗೋಳ ಶಾಸ್ತ್ರಜ್ಞರು ಕೂಡ ಆಗಿದ್ದರು. ಖಗೋಳ ಶಾಸ್ತ್ರದ ಬಗ್ಗೆ ಅರಬಿ ಇಂಗ್ಲಿಷ್ ಮಲಯಾಳಂ ಭಾಷೆಯಲ್ಲಿ ಗ್ರಂಥಗಳನ್ನು ಕೂಡ ರಚಿಸಿದ್ದು ಇವರ ಜೀವನ ಚರಿತ್ರೆಯು ಬರುವ ತಲೆಮಾರಿಗೆ ಮಾರ್ಗದರ್ಶನವೂ ಉದಾತ್ತ ಮಾದರಿಯು ಕೂಡಾ ಆಗಿದ್ದರಿಂದ ಉಸ್ತಾದರ ಪೂರ್ವ ವಿದ್ಯಾರ್ಥಿ ಸಂಘಟನೆ ಅರ್ಶದೀಸ್ ಅಸೋಶಿಯೇಶನ್ ಕೇಂದ್ರ ಸಮಿತಿ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅರ್ಶದಿ ರೈಟಿಂಗ್ ಹಬ್ ವತಿಯಿಂದ ಈ ಕೃತಿ ಬಿಡುಗಡೆಗೊಳ್ಳಲಿದೆ.
ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿರವರ ಅಧ್ಯಕ್ಷತೆ ವಹಿಸಲಿದ್ದು ಸಮಸ್ತ ಉಪಾಧ್ಯಕ್ಷರಾದ ಯುಯಂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಉದ್ಘಾಟಿಸಲಿರುವರು. ಅರ್ಶದೀಸ್ ಅಸೋಶಿಯೇಶನ್ ಕೇಂದ್ರ ಸಮಿತಿ ಅಧ್ಯಕ್ಷರಾದ ಕೆ ಯು ರಹ್ಮಾನ್ ಅರ್ಶದಿ ಕೋಲ್ಪೆ ಸ್ವಾಗತ ಭಾಷಣ ನಡೆಸಲಿದ್ದು ಸಮಸ್ತ ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್ ಅನುಗ್ರಹ ಭಾಷಣ, ಹಸ್ಸನ್ ಅರ್ಶದಿ ಬೆಳ್ಳಾರೆ ಪ್ರಾಸ್ತಾವಿಕ, ಸಲೀಂ ಅರ್ಶದಿ ದೆಮ್ಮಲೆ ಪುಸ್ತಕ ಪರಿಚಯ, ಅಡ್ವೋಕೇಟ್ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ, ಶೈಖುನಾ ಮಹಮ್ಮದ್ ಫೈಝಿ ಕೊಡವಳ್ಳಿ ಉಸ್ತಾದ್ “ಶೈಖಾನಿ” ಪುಸ್ತಕ ಬಿಡುಗಡೆಗೊಳಿಸಲಿದ್ದು ನೆಹರು ನಗರ ಜಮಾತ್ ಅಧ್ಯಕ್ಷರಾದ ಪಿ ಎಸ್ ಅಬ್ದುಲ್ ಹಮೀದ್ ಮೋನು ಮೊದಲ ಕೃತಿ ಸ್ವೀಕರಿಸಲಿರುವರು.
ಎಸ್ಕೆಎಸ್ಎಸ್ಎಫ್ ಜಿಲ್ಲಾಧ್ಯಕ್ಷರಾದ ಅಸ್ಸಯ್ಯದ್ ಅಮೀರ್ ತಂಙಳ್ ಕಿನ್ಯ, ಅಸ್ಸಯ್ಯಿದ್ ಅಕ್ರಮ್ ಅಲೀ ರಹ್ಮಾನಿ, ಅಸ್ಸಯ್ಯದ್ ಬುರ್ಹಾನ್ ತಂಗಳ್ ಅಲ್ ಬುಖಾರಿ ಕಾಸರಗೋಡು, ಎಸ್ಕೆಎಸ್ಎಸ್ಎಫ್ ರಾಜ್ಯಾಧ್ಯಕ್ಷರಾದ ಅನೀಸ್ ಕೌಸರಿ, ಇರ್ಷಾದ್ ದಾರಿಮಿ, ಶಾಸಕ ಯು ಟಿ ಖಾದರ್, ಅಬ್ದುರ್ರಝಾಕ್ ಹಾಜಿ ಮಲೇಶಿಯಾ ಕಬಕ, ದಾರುನ್ನೂರ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಬ್ದುಲ್ ರಜಾಕ್ ಹಾಜಿ, ಮುಸ್ಲಿಂ ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹನೀಫ್ ಹಾಜಿ ಮೊದಲಾದ ಅನೇಕ ಉಲಮಾ ಉಮರಾ ರಾಜಕೀಯ-ಸಾಮಾಜಿಕ ಮುಖಂಡರು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅರ್ಶದೀಸ್ ಅಸೋಸಿಯೇಶನ್ ಕೇಂದ್ರ ಸಮಿತಿ ಅಧ್ಯಕ್ಷರಾದ ಕೆ.ಯು ಖಲೀಲ್ ರಹ್ಮಾನ್ ಅರ್ಶದಿ ಕೋಲ್ಪೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.