ಪುತ್ತೂರು: ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಗಮನಾರ್ಗ ಸೇವೆಯನ್ನು ಗುರುತಿಸಿ ಸಹಕಾರ ಭಾರತಿ ದ.ಕ ಜಿಲ್ಲೆ ಇವರು ಕೊಡಮಾಡುವ ಸಹಕಾರ ಸಾಧನಾ ಪ್ರಶಸ್ತಿ ೨೦೨೧ ಅನ್ನು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಂಸಾವತಿಯವರು ಪಡೆದುಕೊಂಡರು. ತಾಲೂಕಿನಲ್ಲಿ ಒರ್ವರಿಗೆ ಈ ಪ್ರಶಸ್ತಿ ನೀಡಲಾಗಿದ್ದು ಪುತ್ತೂರು ತಾಲೂಕಿನಿಂದ ಹಂಸಾವತಿಯವರು, ಸುಳ್ಯದಿಂದ ಗುತ್ತಿಗಾರು ಸೊಸೈಟಿಯ ವಿನಯ, ಬೆಳ್ತಂಗಡಿಯಿಂದ ವೇಣೂರು ಸೊಸೈಟಿಯ ಜಯಂತ ಕೆಯವರು ಪ್ರಶಸ್ತಿ ಪಡೆದುಕೊಂಡರು. ಜ.೧೦ ರಂದು ಮಾತೃಭೂಮಿ ಸೌಹಾರ್ದ ಸಹಕಾರಿ ನಿ.ಮಾತೃಧಾಮಿ ಗುರುಪುರ ಕೈಕಂಬ ಮಂಗಳೂರು ಇಲ್ಲಿನ ಲಕ್ಷ್ಮಣ್ ರಾವ್ ಇನಾಮ್ದಾರ್ ಸಭಾ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಭಾರತಿಯ ರಾಜ್ಯಾಧ್ಯಕ್ಷ ಎಸ್.ಆರ್.ಸತೀಶ್ಚಂದ್ರರವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ, ಸಹಕಾರ ಭಾರತೀ ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಮತ್ತಿತರರು ಉಪಸ್ಥಿತರಿದ್ದರು.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.