ಪುತ್ತೂರು:ಮುಂಡೂರು ಗ್ರಾ. ಪಂ ಅಧ್ಯಕ್ಷರಾಗಿ ಆಯ್ಕೆಯಾದ ಪುಷ್ಪ ನಡುಬೈಲು ಹಾಗು ನರಿಮೋಗ್ರು ಗ್ರಾ. ಪಂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುಧಾಕರ್ ಕುಲಾಲ್ ರವರಿಗೆ ಮೃತ್ಯುಂಜೇಶ್ವರ ದೇವಸ್ಥಾನ ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ದೇವಸ್ಥಾನದ ಆಡಳಿತಧಿಕಾರಿ ತುಳಸಿ ಹಾಗು ಉತ್ಸವ ಸಮಿತಿ ಗೌರವಾಧ್ಯಕ್ಷ ಅಶೋಕ್ ಪುತ್ತಿಲ ಹಾಗು ಸುಂದರ ಗೌಡ ನಡುಬೈಲು ಪುಷ್ಪರವರನ್ನು ಹೂ ಹಾರ ಮತ್ತು ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಿದರು. ಸುಧಾಕರ್ ಕುಲಾಲ್ರವರನ್ನು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಕಣ್ಣರಾಯ ಮತ್ತು ಪಟ್ಟೆ ಸದಾಶಿವ ಶೆಟ್ಟಿಯವರು ಹಾರ ಹಾಕಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಉತ್ಸವ ಸಮಿತಿ ಸದಸ್ಯರು ಹಾಗು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.