ಕಡಬದ ಗೂರ್ಖ ಮಲಗಿದಲ್ಲೆ ಮೃತ್ಯು
ಕಡಬ: ಇಲ್ಲಿ ಹಲವಾರು ವರ್ಷಗಳಿಂದ ಇದ್ದು, ಈ ಹಿಂದೆ ಕಡಬದಲ್ಲಿ ಗೂರ್ಖ ನಾಗಿ ಕೆಲಸ ಮಾಡಿಕೊಂಡಿದ್ದ ನೇಪಾಲಿ ಮೂಲದ ವ್ಯಕ್ತಿ ರಾಮ್ ಪ್ರಸಾದ್ ಸಿಂಗ್ ಸುಮಾರು 80 ವರ್ಷ ಪ್ರಾಯದ ವೃದ್ದ ಮಲಗಿದಲ್ಲೆ ಏ.3ರಂದು ಮೃತಪಟ್ಟಿದ್ದಾರೆ.
ಗೂರ್ಖಸ್ ಎಂದು ಹೆಸರುವಾಸಿಯಾಗಿದ್ದ ಅವರು ವಿಪರಿತ ಮಧ್ಯಸೇವನೆ ಮಾಡುತ್ತಿದ್ದು ಪೆಟೆಯಲ್ಲಿ ಅಲೆದಾಡುತ್ತಿದ್ದರು, ಏ.2ರಂದು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಬಳಿಯಲ್ಲಿರುವ ಅಶ್ವತ್ಥ ಕಟ್ಟೆಯಲ್ಲಿ ಮಲಗಿದ್ದ ಇವರು ಏ.3ರಂದು ಎದ್ದಿರಲಿಲ್ಲ, ಈ ವೇಳೆ ಕಡಬ ರಘುರಾಮ ನಾಕ್ ಮೊದಲಾದವರು ಉಪಚರಿಸಿದ್ದರು. ಆದರೆ ಸಂಜೆಯ ವೇಳೆಗೆ ಅಲ್ಲೆ ಮೃತಪಟ್ಟಿದ್ದರು. ಬಳಿಕ ಕಡಬ ಠಾಣಾ ಎಸ್.ಐ. ರುಕ್ಮ ನಾಯ್ಕ್, ಸಿಬ್ಬಂದಿ ಭವಿತ್ ರೈ, ಕಡಬ ಪಟ್ಟಣ ಪಂಚಾಯತ್ ಸಿಬ್ಬಂದಿ ಹರೀಶ್ ಬೆದ್ರಾಜೆರವರುಗಳು ಮೃತದೇಹದ ಅಂತಿಮ ಕ್ರಿಯೆಯನ್ನು ಕಡಬ ಸಾರ್ವಜನಿಕ ಸ್ಮಶಾನದಲ್ಲಿ ನೆರವೇರಿಸಿದ್ದಾರೆ.