ಪುತ್ತೂರು: ಮಾರಕ ಕಾಯಿಲೆ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದುಕೊಂಡ ಬಳಿಕ ಕೇಶನಷ್ಟದ ಸಂಕಷ್ಟವನ್ನು ಅನುಭವಿಸುತ್ತಿರುವ ರೋಗಿಗಳಿಗೆ ವಿಗ್ ಮೂಲಕ ಕೇಶ ಕೊಡಿಸುವ ಪ್ರಯತ್ನಕ್ಕೆ ಸಂಬಂಧಿಸಿ ಪುತ್ತೂರಿನ ೯ ಮಂದಿ ‘ಸೀಡ್ಸ್ ಆಫ್ ಹೋಪ್’ ವಿದ್ಯಾರ್ಥಿಗಳ ತಂಡದ ಸಾರಥ್ಯದಲ್ಲಿ ಆರಂಭಗೊಂಡಿರುವ ಕಾರ್ಯಕ್ರಮದಲ್ಲಿ ಗಾಯಕಿ ಅಖಿಲಾ ಪಜಿಮಣ್ಣು ಅವರು ಕೇಶದಾನ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಎ.೬ ರಂದು ಮುಳಿಯ ಜೆಸಿಐ ಟ್ರೈನಿಂಗ್ ಹಾಲ್ನಲ್ಲಿ ನಡೆದ ಕೇಶ ದಾನ ಕಾರ್ಯಕ್ರಮದಲ್ಲಿ ಅವರು ಕೇಶದಾನ ಮಾಡಿದರು. ಈಗಾಗಲೇ ೫ ಮಂದಿ ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡಿದ ” ಸೀಡ್ಸ್ ಆಫ್ ಹೋಪ್” ತಂಡದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಆದ್ಯ ಸುಲೋಚನಾ ಮುಳಿಯ ಅವರ ಪರಿಕಲ್ಪನೆಯಲ್ಲಿ ವರ್ಷ ಭಟ್, ನೇಹಾ ಭಟ್, ಕನ್ಯ ಸಚಿನ್ ಶೆಟ್ಟಿ ಕೇಶದಾನ ಕಾರ್ಯಕ್ರಮ ನಡೆಯುತ್ತಿದೆ.