ಮುಕ್ರಂಪಾಡಿ ದುರಸ್ಥಿಗೆ ಬಂದ ಲಾರಿಗೆ ಬೆಂಕಿ

0

ಪುತ್ತೂರು: ಮುಕ್ರಂಪಾಡಿಯಲ್ಲಿರುವ ಗ್ಯಾರೇಜೊಂದರಲ್ಲಿ ದುರಸ್ಥಿಗೆ ಬಂದಿದ್ದ ಲಾರಿ ಬೆಂಕಿಗಾಹುತಿಯಾದ ಘಟನೆ ಡಿ.31ರ ತಡ ರಾತ್ರಿ ನಡೆದ ಮತ್ತು ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ವಿಟ್ಲದ ಹರೀಶ್ ಎಂಬವರಿಗೆ ಸಂಬಂಧಪಟ್ಟ ಕೆ.ಎಲ್.60 ಎ 4610 ಲಾರಿಯನ್ನು ಮುಕ್ರಂಪಾಡಿಯ ವಿಕಾಸ್ ಗ್ಯಾರೇಜ್‌ನಲ್ಲಿ ದುರಸ್ಥಿ ಕಾರ್ಯಕ್ಕೆ ನಿಲ್ಲಿಸಲಾಗಿತ್ತು. ಡಿ.31 ರಾತ್ರಿ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಕಂಡು ಬಂದಿದ್ದು, ಲಾರಿಯ ಕ್ಯಾಬಿನ್ ಸೇರಿದಂತೆ ಭಾಗಶಃ ಸುಟ್ಟು ಹೋಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸಿದ್ದಾರೆ.

LEAVE A REPLY

Please enter your comment!
Please enter your name here