ಪುತ್ತೂರು ಜೋಡುಕರೆ ಕಂಬಳ ಫೆ.13,14 ಕ್ಕೆ ಮುಂದೂಡಿಕೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುರಾತನ ಜಾನಪದ ಕಲೆಗಳಲ್ಲಿ ಒಂದಾದ  ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳವು ಜ.15ರಂದು ನಿಗದಿಯಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ವಿಧಿಸಿರುವುದರಿಂದ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳವನ್ನು ಫೆ.13 ಮತ್ತು 14 ರಂದು ಮುಂದೂಡಲಾಗಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ತಿಳಿಸಿದರು. ಜ.1ರಂದು ಕಂಬಳ ಕರೆಯ ಬಳಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಅವರು ಕೊರೋನಾದ ಹಿನ್ನೆಲೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಕಂಬಳಾಭಿಮಾನಿಗಳು ಸಾರ್ವಜನಿಕರು ಸಹಕರಿಸುವಂತೆ ಅವರು ವಿನಂತಿಸಿದರು ಅಲ್ಲದೆ ಕಂಬಳದ ಯಶಸ್ವಿಯ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕುಲಾಲ್‌ ಪಿ.ವಿ, ಕೋಶಾಧಿಕಾರಿ ಪಂಜಿಗುಡ್ಡೆ ಈಶ್ವರ ಭಟ್‌, ಉಪಾದ್ಯಕ್ಷರುಗಳಾದ ವಸಂತ್‌ ಕುಮಾರ್‌ ರೈ ಜೆ.ಕೆ, ಜಿನ್ನಪ್ಪ ಪೂಜಾರಿ ಮುರ, ಜೋಕಿಮ್‌ ಡಿಸೋಜ ಸೇರಿದಂತೆ ವಿವಿಧ ಪದಾಧಿಕಾರಿಗಳಾದ ಪ್ರೇಮನಂದ ನಾಯಕ್‌, ಸುದೇಶ್‌ ಕುಮಾರ್‌ ಚಿಕ್ಕಪುತ್ತೂರು, ಕೇಶವ, ವಿಲ್ಫ್ರೆಡ್‌ ಡಿಸೋಜ, ಶಶಿಕುಮಾರ್‌ ನೆಲ್ಲಿಕಟ್ಟೆ, ಹಸೈನಾರ್‌ ಬನಾರಿ, ಖಾದರ್‌ ಪೋಳ್ಯ, ರೋ಼ಶನ್‌ ರೈ ಬನ್ನೂರು, ಬಾಳಕೃಷಗಣ ನಾಯಕ್‌ ನೆಲ್ಲಿಕಟ್ಟೆ, ಡಿ.ಕೆ ಅಬ್ದುಲ್‌ ರಹಿಮಾನ್‌, ಸುರೇಂದ್ರ ರೈ ನೇಸಾರ, ಮಂಜುನಾಥ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here