ಕಲ್ಲೆಂಬಿ : ಸಾಮೂಹಿಕ ಸತ್ಯನಾರಾಯಣ ಪೂಜೆ

0

 

ಎಡಮಂಗಲ ಗ್ರಾಮದ ಕಲ್ಲೆಂಬಿ ಶ್ರೀ ಉಳ್ಳಾಕುಲು ಪುರುಷ ದೈವಸ್ಥಾನದಲ್ಲಿ ಸೆಪ್ಟೆಂಬರ್ 1ರಂದು ನಡುಬೈಲು ಶಿವಕುಮಾರ್ ಅವರ ತಂಡದ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಮತ್ತು ಮಹಾಗಣಪತಿ ಹೋಮ ನಡೆಯಿತು.
ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಬಳ್ಳಡ್ಕ ಕಲ್ಲೆಂಬಿ ಎಲ್ಲ ಪದಾಧಿಕಾರಿಗಳು ಕಲ್ಲೆಂಬಿ ಗ್ರಾಮದ ಕೂಡುಕಟ್ಟಿನ ಸದಸ್ಯ ಭಕ್ತಾದಿಗಳು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆದಷ್ಟು ಬೇಗ ದೈವಸ್ಥಾನ ನಿರ್ಮಿಸುವುದೆಂದು ಪ್ರಾರ್ಥನೆ ಮಾಡಲಾಯಿತು.
( ವರದಿ : ಎಎಸ್ ಎಸ್ ಅಲೆಕ್ಕಾಡಿ)

LEAVE A REPLY

Please enter your comment!
Please enter your name here