ಸುಳ್ಯ ತಾಲೂಕು ಬಿ.ಸಿ.ಎಂ. ಕಲ್ಯಾಣಾಧಿಕಾರಿಯಾಗಿ ಶ್ರೀಮತಿ ಗೀತಾ ನೇಮಕ

0

 

ಸುಳ್ಯ ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿಯಾಗಿ ಶ್ರೀಮತಿ ಗೀತಾ ಎಂಬವರು ನೇಮಕಗೊಂಡಿದ್ದಾರೆ.
೧೧ ವರ್ಷಗಳಿಂದ ಪುತ್ತೂರಿನಲ್ಲಿ ವಿದ್ಯಾರ್ಥಿ ನಿಲಯ ಪಾಲಕರಾಗಿರುವ ಗೀತಾರವರು, ಅದಕ್ಕಿಂತ ಮೊದಲು ಬೆಳ್ತಂಗಡಿಯಲ್ಲಿ 9ವರ್ಷ ನಿಲಯಪಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾಗಿ ಭಡ್ತಿ ಗೊಂಡಿರುವ ಗೀತಾರವರು ಸುಳ್ಯ ತಾಲ್ಲೂಕಿಗೆ ವರ್ಗಾವಣೆಗೊಂಡಿದ್ದಾರೆ. ಮೂಲತಃ ಬಜ್ಪೆಯವರಾದ ಇವರ ಪತಿ ನಿವೃತ್ತ ಸೈನಿಕರಾಗಿದ್ದು, ಬೆಂಗಳೂರಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರಿ ಮತ್ತು ಪುತ್ರ ಪುತ್ತೂರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here