ಪುತ್ತೂರು: ಚೆನ್ನರಾಯಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಈಶ್ವರಮಂಗಲ ಹಾಗೂ ವಿಟ್ಲದ ಈರ್ವರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಊರಿಗೆ ಬರುತ್ತಿದ್ದ ವೇಳೆ ಚೆನ್ನರಾಯಪಟ್ಟಣದಲ್ಲಿ ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಈರ್ವರು ಮೃತಪಟ್ಟಿದ್ದಾರೆ.
ಈಶ್ವರಮಂಗಲ ಸಮೀಪದ ಬಂಟುಕಲ್ಲು ನಿವಾಸಿ ಬೆಂಗಳೂರಿನ ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿದ್ದ ದೇವಿಪ್ರಸಾದ್ ಶೆಟ್ಟಿ ಮತ್ತು ವಿಟ್ಲ ಕೊಳ್ನಾಡು ಗ್ರಾಮದ ಕೆಳಗಿನ ಬಾರೆಬೆಟ್ಟು ನಿವಾಸಿ ದಿ.ಚಂದ್ರಶೇಖರ ಕುಲಾಲ್ ರವರ ಪುತ್ರ, ಮುಡಿಪು ಇನ್ಫೋಸಿಸ್ ಉದ್ಯೋಗಿಯಾಗಿದ್ದ ಸುದರ್ಶನ್(32 ವ) ಮೃತಪಟ್ಟವರು ಎಂದು ತಿಳಿದು ಬಂದಿದೆ. ಮೃತ ಸುದರ್ಶನ್ ರವರು ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.