ಕೇರಳದಿಂದ ಸಿಂಗಾಪುರಕ್ಕೆ ಸೈಕಲ್ ನಲ್ಲಿ ಪರ್ಯಟನೆಗೆ ಹೊರಟ ಸಹೋದರರು

0

 

ಸುಳ್ಯದ ಉದ್ಯಮಿ ಜಗದೀಶ್ ಸರಳಿಕುಂಜರವರಿಂದ ಆತಿಥ್ಯ

ಕೇರಳದ ಕೊಯಿಕೊಡಿನ ನಿವಾಸಿಗಳಾದ ಆದರ್ಶ್ ಮತ್ತು ವಿನೀತ್ ಎಂಬವರು ಸೈಕಲ್ ನಲ್ಲಿ ಕೇರಳದಿಂದ ಸಿಂಗಾಪುರ್ ಕಡೆ ಹೊರಟು ಸೆ.6 ರಂದು ಸಾಯಂಕಾಲ ಮಾರ್ಗ ಮಧ್ಯದಲ್ಲಿ ಸುಳ್ಯ ತಲುಪಿದರು.

ಮಳೆಯ ಕಾರಣ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ನಿಂತಿದ್ದ ಇವರನ್ನು ಸುನಿಲ್ ಕೇರ್ಪಳರವರು ಪರಿಚಯ ಮಾಡಿಕೊಂಡು ಮಾತಾಡುವಾಗ ತಮ್ಮ ಪರ್ಯಟನೆಯ ವಿವರಗಳನ್ನು ತಿಳಿಸಿದ್ದಾರೆ.

ಆ ಬಳಿಕ ಸುನಿಲ್ ರವರು ಅವರಿಗೆ ಸುಳ್ಯದ ಉದ್ಯಮಿ, ಗಣೇಶ್ ಇಂಡಸ್ಟ್ರೀಸ್ ಮಾಲಕರಾದ ಜಗದೀಶ್ ಸರಳಿಕುಂಜರ ಮನೆಯಲ್ಲಿ ಊಟ ವಸತಿಯ ವ್ಯವಸ್ಥೆ ಮಾಡಿದರು. ಜಗದೀಶ್ ರವರು ದಾರಿ ಖರ್ಚಿಗೆ ಹಣವನ್ನು ನೀಡಿದರು.
ಸೆ.07 ರಂದು ಬೆಳಿಗ್ಗೆ ಇಬ್ಬರನ್ನೂ ಪ್ರೀತಿಪೂರ್ವಕವಾಗಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಜಗದೀಶ್ ಸರಳಿಕುಂಜ, ಅವರ ಧರ್ಮಪತ್ನಿ ಸವಿತಾ ಹಾಗೂ ಗಣೇಶ್ ಇಂಡಸ್ಟ್ರಿಯ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.

ಸುನಿಲ್ , ಜಗದೀಶ್ ಹಾಗೂ ಸುಳ್ಯದ ಜನರ ಸ್ನೇಹಪೂರ್ವಕ ಆತಿಥ್ಯಕ್ಕೆ ಇಬ್ಬರೂ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here