ಪುತ್ತೂರು:ದೇಶಕ್ಕೆ ಸ್ವಾತಂತ್ರ್ಯ ಬಂದು೭೫ ವರ್ಷಗಳು ಪೂರ್ತಿಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಆಯುಷ್ ಸಚಿವಾಲಯವು ಮಕರ ಸಂಕ್ರಾತಿಯ ಮುನ್ನಾ ದಿನ ಸೂರ್ಯ ನಮಸ್ಕಾರವನ್ನು ದೇಶದಾದ್ಯಂತ ಆಯೋಜಿಸಿತ್ತು. ಇದರ ಭಾಗವಾಗಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ೩/೧೯ಕರ್ನಾಟಕ ಬೆಟಾಲಿಯನ್ ಎನ್ಸಿಸಿ ಘಟಕವು ‘ಸೂರ್ಯ ನಮಸ್ಕಾರ’ ವಿಶೇಷ ಕಾರ್ಯಕ್ರಮವನ್ನು ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕೆಡೆಟ್ ವರ್ಷ ಕೆ.ಟಿ ಇವರ ನೇತೃತ್ವದಲ್ಲಿ೧೧೦ ಮಂದಿ ಎನ್ಸಿಸಿ ಕೆಡೆಟ್ಗಳು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೂರ್ಯ ನಮಸ್ಕಾರದ ವಿವಿಧ ಹಂತದ ಯೋಗಾಸನವನ್ನು ಉತ್ಸಾಹದಿಂದ ಮಾಡಿದರು. ಕಾಲೇಜಿನ ಎನ್ಸಿಸಿ ಘಟಕದ ಅಧಿಕಾರಿ ಲೆ|ಜೋನ್ಸನ್ ಡೇವಿಡ್ ಸಿಕ್ವೇರಾರವರು ಕಾರ್ಯಕ್ರಮವನ್ನು ಸಂಘಟಿಸಿದರು. ಹವಲ್ದಾರ್ ದೇವ್ ಬಾಹದೂರ್ ಅಲೆ ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ| ಆಂಟನಿ ಪ್ರಕಾಶ್ ಮೊಂತೆರೋ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.