ಬಂಟ್ವಾಳ: ಮಾಣಿ ಕಾಪಿಕಾಡು ನಿವಾಸಿ ಶಿವಪ್ರಸಾದ್ ಕೆ.(23ವ.) ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜ.16 ರಂದು ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕಬಡ್ಡಿ ಆಟಗಾರನಾಗಿರುವ ಇವರು ಮಾಣಿ ಯುವಕ ಮಂಡಲದ ಸದಸ್ಯರಾಗಿದ್ದರು. ಮೃತರು ತಾಯಿ, ಸಹೋದರಿ, ಸಹೋದರರವರನ್ನು ಅಗಲಿದ್ದಾರೆ.