ಉಪ್ಪಿನಂಗಡಿ: ಕೊಯಿಲ ವಲಯದ ಗಂಡಿಬಾಗಿಲು ಕೇಂದ್ರದಲ್ಲಿ ೩ ಪುಟಾಣಿಗಳು ತಮ್ಮ ಸಹಪಾಠಿ ಪುಟಾಣಿ ವಿದ್ಯಾರ್ಥಿಗಳ ಜೊತೆಗೂಡಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಅಂಗನವಾಡಿ ಕೇಂದ್ರದಲ್ಲಿ ಮನೋಹರ್ ಮತ್ತು ಕಲಾವತಿ ದಂಪತಿಯ ಪುತ್ರ ಶಿಹಾನ್ ಹಾಗೂ ಮಧು ಮತ್ತು ಸಹನಾ ದಂಪತಿಯ ಪುತ್ರಿ ಅಹನ್ಯ, ತುಕರಾಮ್ ಮತ್ತು ಯಶೋಧಾ ದಂಪತಿಯ ಪುತ್ರಿ ಶ್ರೇಯಾ ಈ ೩ ಪುಟಾಣಿಗಳು ಹುಟ್ಟು ಹಬ್ಬವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಯಶೋಧ ಡಿ., ವಲಯ ಮೇಲ್ವಿಚಾರಕಿ ಉಮಾವತಿ ಕೆ., ಅಂಗನವಾಡಿ ಕಾರ್ಯಕರ್ತೆ ಮೋಹಿನಿ, ಸಹಾಯಕಿ ಐಸಾಬಿ ಮತ್ತಿತರ ಪೋಷಕರು ಉಪಸ್ಥಿತರಿದ್ದರು.