ಬನ್ನೂರು ಮಹಾಲಕ್ಷ್ಮೀ ಮಂದಿರ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವದಲ್ಲಿ ಪವಾಡ – ಬಿಂಬ ಪ್ರತಿಷ್ಠೆ ವೇಳೆ ಅಮ್ಮನ ಪಾದದಿಂದ ಹಿಂಗಾರ ಪ್ರಸಾದ ರೂಪದಲ್ಲಿ ಭೂ ಸ್ಪರ್ಶ

0

ಪುತ್ತೂರು: ಬನ್ನೂರು ಮಹಾಲಕ್ಷ್ಮೀ ಮಂದಿರದಲ್ಲಿ ಬ್ರಹ್ಮಕಲಶೋತ್ಸವದಲ್ಲಿ ಅಮ್ಮನವರ ಪಾದದಿಂದ ಹಿಂಗಾರ ಪ್ರಸಾದ ರೂಪದಲ್ಲಿ ಭೂ ಸ್ಪರ್ಶವಾದ ಘಟನೆ ಜ.21ರ ಬೆಳಗ್ಗಿನ ಸಮೂರ್ಹದಲ್ಲಿ ನಡೆದಿದೆ.


ಬ್ರಹ್ಮಶ್ರೀ ವೇ ಮೂ ಸುಬ್ರಹ್ಮಣ್ಯ ಬಳ್ಳಕುರಾಯ ಅವರ ನೇತೃತ್ವದಲ್ಲಿ ಬನ್ನೂರು ಶ್ರೀ‌ಮಹಾಲಕ್ಷ್ಮೀ ಮಂದಿರದಲ್ಲಿ ಅಮ್ಮನವರ ಬಿಂಬ ಪ್ರತಿಷ್ಠೆ ವೇಳೆ ಪ್ರತಿಷ್ಠಾ ಜಪ ಮಾಡುತ್ತಿದ್ದ ಸಂದರ್ಭ ಅಮ್ಮನವರ ಶಿಲಾ ಬಿಂಬದ ಪಾದದಲ್ಲಿದ್ದ ಹಿಂಗಾರವು ಪ್ರಸಾದ ರೂಪದಲ್ಲಿ ಭೂಸ್ಪರ್ಶವಾದ ಘಟನೆ ಭಕ್ತರ ಕಣ್ಣು ಮುಂದೆ ನಡೆದಿದೆ. ಬಳಿಕ ಬಿಂಬವನ್ನು ಪೀಠದಲ್ಲಿ ಇರಿಸಿ ಅಭಿಷೇಕ ಮಾಡಲಾಯಿತು. ಜ.20ರಂದು ಪರಿಸರದ ಸುತ್ತ ನಾಗರ ಹಾವೊಂದು ಮಂದಿರಕ್ಕೆ ಕೂಗಲತೆ ದೂರದಿಂದು ಸುತ್ತು ಹಾಕಿ ಹೋಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಬನ್ನೂರು ಮಹಾಲಕ್ಷ್ಮೀ ಕ್ಷೇತ್ರ ಕಾರ್ಣಿಕ ಶಕ್ತಿಯಾಗಿ ಇಲ್ಲಿ ನೆಲೆಸಿದ್ದಾರೆ ಎಂದು ಭಕ್ತರ ಮನದಾಳದ ಮಾತು.

LEAVE A REPLY

Please enter your comment!
Please enter your name here