ಪುತ್ತೂರು : ಬಲ್ನಾಡು ಶ್ರೀವನಶಾಸ್ತಾರ ಕ್ಷೇತ್ರ, ಮೂಲಸ್ಥಾನದಲ್ಲಿ ಬಲ್ನಾಡು ಬ್ರಾಹ್ಮಣ ಸಮಾಜದ ವತಿಯಿಂದ ಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಡುಗೆ ಪಾಕಶಾಲೆಯನ್ನು ಆಡಳಿತ ಸಮಿತಿಯವರಿಗೆ ಹಸ್ತಾಂತರಿಸಲಾಯಿತು. ಬ್ರಾಹ್ಮಣ ಸಮಾಜದ ಗೌರವಾಧ್ಯಕ್ಷ ಡಾಕ್ಟರ್ ಎಮ್ಎಸ್ ಭಟ್, ಹಿರಿಯರಾದ ಸದಾಶಿವ ನೆಲ್ಲಿತ್ತಾಯ, ಅಧ್ಯಕ್ಷರಾದ ರವಿಕುಂಜತ್ತಾಯ, ಆಡಳಿತ ಸಮಿತಿಯ ಅಧ್ಯಕ್ಷ ಮಾಧವ ಗೌಡ ಕಾಂತಿಲ ಹಾಗೂ ಸದಸ್ಯರು ಭಕ್ತಾದಿಗಳು ಭಾಗವಹಿಸಿದ್ದರು.