ಕೋಡಿಂಬಾಡಿ ವನಿತ ಸಮಾಜದಿಂದ ಸಂಕ್ರಾಂತಿ ಆಚರಣೆ

0

ಪುತ್ತೂರು: ಕೋಡಿಂಬಾಡಿ ವನಿತಾ ಸಮಾಜದ ಸಾಮಾನ್ಯ ಸಭೆ ಜ.20ರಂದು ನಡೆಯಿತು. ಹೊಷ ವರುಷ ಮತ್ತು ಸಂಕ್ರಾಂತಿಯನ್ನು ಎಳ್ಳು, ಬೆಲ್ಲ ಹಂಚುವುದರ ಮೂಲಕಆಚರಿಸಲಾಯಿತು. ವನಿತಾ ಸಮಾಜದ ಅಧ್ಯಕ್ಷೆ ಪೂರ್ಣಿಮ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಸಂಕ್ರಾಂತಿ ಹಬ್ಬದ ಮಹತ್ವ ತಿಳಿಸಿದರು.

ಗೌರವಾಧ್ಯಕ್ಷೆ ಭುವನೇಶ್ವರಿ ಶರ್ಮ ಮಠದಬೆಟ್ಟು ಸ್ವಾಗತಿಸಿದರು. ರಾಧಿಕಾ ಸಾಮಂತ್ ನೆಕ್ಕರಾಜೆ ಪ್ರಾರ್ಥಿಸಿದರು. ಯಶೋದ ಶ್ರೀನಿವಾಸ್ ಕೋಡಿಂಬಾಡಿ ವಂದಿಸಿದರು. ಕಾರ್ಯದರ್ಶಿ ವೇದಾವತಿ ಸದಾಶಿವ ರೈ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಸೌಮ್ಯ ಶಿವಪ್ರಕಾಶ್ ಕೋಡಿ ಮೋನಡ್ಕ, ರೇಣುಕಾ ಮುರಳೀಧರ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here