ಕೆನರಾ ಬ್ಯಾಂಕ್ ಆಲಂಕಾರು ಶಾಖೆ ಸ್ಥಳಾಂತರಗೊಂಡು ಶುಭಾರಂಭ

0

 

ಆಲಂಕಾರು: ಆಲಂಕಾರು ಶ್ರೀದುರ್ಗಾಂಬಾ ಕಾಲೇಜು ರಸ್ತೆಯಲ್ಲಿರು ಕಟ್ಟಡದಲ್ಲಿ ವ್ಯವಹರಿಸುತ್ತಿದ್ದ ಕೆನರಾ ಬ್ಯಾಂಕ್ ಶಾಖೆಯು ಆಲಂಕಾರು ಮುಖ್ಯರಸ್ತೆಯಲ್ಲಿರುವ ದುರ್ಗಾಟವರ್‍ಸ್‌ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಕೆನರಾ ಬ್ಯಾಂಕ್ ಜನರಲ್ ಮ್ಯಾನೆಜರ್ ಯೋಗೀಶ ಆಚಾರ್ಯರವರು ಶಾಖೆ ಉದ್ಘಾಟಿಸಿ ಮಾತನಾಡಿ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕಾದರೆ ಉತ್ತಮ ಜಾಗ ಅವಶ್ಯಕತೆ ಇರುತ್ತದೆ. ಬ್ಯಾಂಕ್‌ನ ವಿನಂತಿಯ ಮೆರೆಗೆ ರಾಧಾಕೃಷ್ಣ ರೈ ಪರಾರಿಗುತ್ತಿನವರು ಶ್ರೀದುರ್ಗಾಟವರ್‍ಸ್‌ನಲ್ಲಿ ಉತ್ತಮ ಸ್ಥಳಾವಕಾಶ ಹಾಗು ಸುಸಜ್ಜಿತ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಡಿಜಿಟಲ್ ಬ್ಯಾಕಿಂಗ್ ವ್ಯವಸ್ಥೆಯ ಬಗ್ಗೆ ತಿಳಿಸಿ ಶಾಖೆಯ ಬೆಳವಣಿಗೆ ಗ್ರಾಹಕರ ಸಹಕಾರ ಅತೀ ಅಗತ್ಯ ಎಂದು ತಿಳಿಸಿ ನಿಮಗೆ ಕೆನರಾ ಬ್ಯಾಂಕ್ ನಗುಮುಖದ ಸೇವೆಯನ್ನು ನೀಡುತ್ತದೆ. ಪ್ರಸಕ್ತ ಕೆನರಾ ಬ್ಯಾಂಕ್ ರೂ.೫೩ ಕೋಟಿ ವ್ಯವಹಾರ ಮಾಡುತ್ತಿದೆ ಎಂದು ಹೇಳಿ ಕೆನರಾ ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿರುವ ಸೇವೆಗಳ ಬಗ್ಗೆ ತಿಳಿಸಿದರು.


ಕೆನರಾ ಬ್ಯಾಂಕ್ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ರಂಜಿತ್ ಕುಮಾರ್, ಆಲಂಕಾರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ, ಆಲಂಕಾರು ಶ್ರೀದುರ್ಗಾಟವರ್‍ಸ್‌ನ ಮಾಲಕ ರಾಧಾಕೃಷ್ಣ ರೈ ಪರಾರಿಗುತ್ತು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈ ಮನವಳಿಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಆಲಂಕಾರು ಕೆನರಾ ಬ್ಯಾಂಕ್ ಶಾಖೆಯ ಶಾಖಾ ಮ್ಯಾನೆಜರ್ ಸಂಜೀವ್ ಪಣಿಕ್ಕರ್ ಸ್ವಾಗತಿಸಿ, ಪುತ್ತೂರು ರಿಜನಲ್ ಚೀಪ್ ಮ್ಯಾನೇಜರ್ ಪ್ರವೀಣ್ ಕುಮಾರ್ ವಂದಿಸಿದರು. ಬ್ಯಾಂಕ್ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here