ನೆಲ್ಯಾಡಿ: ಜ.21ರಂದು ಬೆಳ್ಳಂಬೆಳಿಗ್ಗೆ ಉದನೆ ಪೇಟೆ ಸಮೀಪ ಹೆದ್ದಾರಿಯಲ್ಲಿ ಕಾಡಾನೆಯೊಂದು ಓಡಾಟ ನಡೆಸಿ ಜನರನ್ನು ಭಯಭೀತಗೊಳಿಸಿದೆ.
ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ಶಿರಾಡಿ ರಕ್ಷಿತಾರಣ್ಯದಿಂದ ಬಂದ ಕಾಡಾನೆಯೊಂದು ಉದನೆ ಪೇಟೆಯಿಂದ ತುಸು ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟಿ ಗುಂಡ್ಯ ಹೊಳೆಯ ಕಡೆಗೆ ಸಂಚರಿಸಿದೆ. ಆನೆ ಹೆದ್ದಾರಿಗೆ ಬರುತ್ತಿದ್ದಂತೆ ಬೈಕ್ ಹಾಗೂ ಇತರೇ ವಾಹನ ಸವಾರರು ವಾಹನ ಓಡಾಟ ಸ್ಥಗಿತಗೊಳಿಸಿ ತಮ್ಮ ಮೊಬೈಲ್ಗಳಲ್ಲಿ ಆನೆಯ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆನೆ ಸಂಚಾರದಿಂದ ವಾಹನ ಸವಾರರು, ಜನರು ಭಯಬೀತಗೊಂಡಿದ್ದರೂ ಆನೆ ಯಾವುದೇ ಹಾನಿ ಮಾಡದೇ ಗುಂಡ್ಯ ಹೊಳೆ ಕಡೆ ತೆರಳಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಶಿರಾಡಿ, ಉದನೆ ಭಾಗದಲ್ಲಿ ಕಾಡಾನೆಗಳು ಪದೇ ಪದೇ ಕೃಷಿ ತೋಟಗಳಿಗೆ ನುಗ್ಗಿ ಕೃಷಿ ಹಾನಿಗೊಳಿಸುತ್ತಿವೆ.