ಸವಣೂರು ಗ್ರಾಮ ದೈವಗಳ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಸಿರು ಹೊರೆಕಾಣಿಕೆ

0

ಸವಣೂರು:   ಜ. 24 ರಂದು ನಡೆಯಲಿರುವ ಸವಣೂರು ಗ್ರಾಮದ ಮಾಲೆತ್ತಾರು ಚೌಕಿಮಠದ ಶ್ರೀ ಶಿರಾಡಿ, ರಕ್ತೇಶ್ವರಿ ಮಹಷಂತ್ತಾಯ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜ.23 ರಂದು ಸವಣೂರು ಬಸದಿ ವಠಾರದಿಂದ ಮಾಲೆತ್ತಾರು ಚೌಕಿಮಠದ ತನಕ ಹಸಿರುಹೊರೆ ಕಾಣಿಕೆ ಮೆರವಣಿಗೆ ನಡೆಯಿತು.

 

ದೈವ ಸ್ಥಾನದ ಆಡಳಿತದಾರ ಸವಣೂರುಗುತ್ತು ವೆಂಕಪ್ಪ ಶೆಟ್ಟಿ ರವರು ಮೆರವಣಿಗೆ ಗೆ ಚಾಲನೆ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಜ್ವಲ್ ಕೆ.ಆರ್.ಕೋಡಿಬೈಲು, ಮಾಜಿ ಅಧ್ಯಕ್ಷ ಪ್ರಮೋದ್ ಕೆ.ಆರ್.ಕೋಡಿಬೈಲು, ಕಾರ್ಯದರ್ಶಿ ಗಣೇಶ್ ಪಟ್ಟೆ, ಉಪಾಧ್ಯಕ್ಷ ಭಾಸ್ಕರ ಅಡೀಲು, ಉದ್ಯಮಿ ಸವಣೂರು ಎನ್ ಸುಂದರ ರೈ, ಪ್ರಕಾಶ್ ಕುಮಾರ್ ಬಂಬಿಲ, ಸುಪ್ರೀತ್ ರೈ, ತಾರಾನಾಥ ಕಾಯರ್ಗ, ಗಂಗಾಧರ ಸುಣ್ಣಾಜೆ, ಚೇತನ್ ಕೋಡಿಬೈಲು, ಕಿಶೋರ್‌ ಕೋಡಿಬೈಲು, ಕಿರಣ್ ಕೋಡಿಬೈಲು, ಸತೀಶ್ ಬಲ್ಯಾಯ, ಬೆಳಿಯಪ್ಪ ಗೌಡ, ರಾಘವ ಗೌಡ, ಉಮಾಪ್ರಸಾದ್ ರೈ ನಡುಬೈಲು, ಇಂದಿರಾ ಬಿ.ಕೆ, ಶ್ರೀಧರ ಸುಣ್ಣಾಜೆ, ಚಂದ್ರವತಿ ಸುಣ್ಣಾಜೆ, ಮಮತಾ ಬೇರಿಕೆ, ಜಯರಾಮ ರೈ ಮೂಡಂಬೈಲು, ಮೋಹನ್ ರೈ ಕೆರೆಕೋಡಿ, ಬಾಲಚಂದ್ರ ರೈ ಕೆರೆಕೋಡಿ, ಬಾಳಪ್ಪ ಪಟ್ಟೆ, ಕೀರ್ತನ್ ಕೋಡಿಬೈಲು, ವಿಠಲ ರೈ ನೆಕ್ಕರೆ, ಕಾಂತಪ್ಪ ಪೂಜಾರಿ, ದಯಾನಂದ ಮಾಲೆತ್ತಾರು, ವಿಠಲ ಗೌಡ ಪಟ್ಟೆ, ದಾಮೋದರ ಗೌಡ ಪಟ್ಟೆ, ಬಾಲಚಂದ್ರ ಕನಡಕುಮೇರು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here