ಪುತ್ತೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪುತ್ತೂರು, ಪಶುಚಿಕಿತ್ಸಾ ಕೇಂದ್ರ ಕೆದಂಬಾಡಿ, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಸನ್ಯಾಸಿಗುಡ್ಡೆ ಮತ್ತು ತಿಂಗಳಾಡಿ ಕೆದಂಬಾಡಿ ಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಜಾನುವಾರು ಬಂಜೆತನ ನಿವಾರಣಾ ಚಿಕಿತ್ಸೆ ಮತ್ತು ಮಾಹಿತಿ ಶಿಬಿರ ಜ. 25 ರಂದು ಬೆಳಿಗ್ಗೆ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಲಿದೆ. ಪುತ್ತೂರು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಮಾಹಿತಿ ನೀಡಲಿದ್ದಾರೆ. ಪಶುಪಾಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮತ್ತು ಹೆಚ್ಚಿನ ಮಾಹಿತಿಗೆ 94491 06931 ಕರೆ ಮಾಡಬಹುದಾಗಿದೆ ಎಂದು ಕಡಮಜಲು ಸುಭಾಸ್ ರೈ ತಿಳಿಸಿದ್ದಾರೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.