ಅರಿಯಡ್ಕ ಗ್ರಾಮದ ಕುರಿಂಜ ಕುಕ್ಕುತ್ತಡಿ ಸ್ಥಾನದಿಂದ ಭಂಡಾರ ಹೊರಟು ಬೈರಮೂಲೆ ಎಂಬಲ್ಲಿ ಶ್ರೀ ವಿಷ್ಣು ಮೂರ್ತಿ ದೈವದ ಒತ್ತೆಕೋಲ ಜ.22 ರಂದು ವಿಜ್ರಂಭಣೆಯಿಂದ ನಡೆಯಿತು.
ಈಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇದರ ವತಿಯಿಂದ ಭಜನಾ ಸಂಕೀರ್ತನಾ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಬೆಳ್ಳಿಪ್ಪಾಡಿ ಶ್ಯಾಮ್ ಸುಂದರ್ ಅಡ್ಯಂತಾಯ, ಬೆಳ್ಳಿಪ್ಪಾಡಿ ಜತೀಂದ್ರನಾಥ ಅಡ್ಯಂತಾಯ, ಡಾ.ಚಂದ್ರಶೇಖರ ಶೆಟ್ಟಿ ಬಂಡಾಡಿ, ಬೆಳ್ಳಿಪ್ಪಾಡಿ ಶ್ರೀ ದೇವಿ ಚಂದ್ರ ಶೇಖರ ಶೆಟ್ಟಿ, ಬೆಳ್ಳಿಪ್ಪಾಡಿ ರಾಜಾರಾಮ ರೈ, ಬೆಳ್ಳಿಪ್ಪಾಡಿ ಶಿವಪ್ರಸಾದ ಆಳ್ವ ಮತ್ತು,ಕುರಿಂಜ ತರವಾಡು ಮನೆ ಮಣಿಯಾಣಿ ಕುಟುಂಬಸ್ಥರು , ಅತಿಥಿಗಳನ್ನು ಸ್ವಾಗತಿಸಿದರು.