ಮಾರುತಿ ಸುಜ್ಹುಕಿ ಕಾರುಗಳ ಗ್ರಾಮೀಣ ಮಹೋತ್ಸವಕ್ಕೆ ಚಾಲನೆ

0

ಪುತ್ತೂರು : ವಿನೂತನ ರೀತಿಯಾ ಹಾಗೂ ನಿರ್ವಹಣೆಯೂ ಕೂಡ ಸುಲಭ ರೀತಿಯಲ್ಲಿ ಮಾಡಬಹುದಾದ ಕಾರುಗಳ ದಿಗ್ಗಜ ಮಾರುತಿ ಸುಜ್ಹುಕಿಯು ತನ್ನ ಕಾರು ಡೀಲರ್, ಭಾರತ್ ಅಟೋಕಾರ್ಸ್ ಜತೆಯಾಗಿ ಜ .24 ಮತ್ತು 25 ಈ ಎರಡು ದಿನಗಳ ಗ್ರಾಮೀಣ ಮಹೋತ್ಸವವನ್ನು ಕಾರು ಪ್ರಿಯರಿಗಾಗಿ ಪುತ್ತೂರು ನೆಹರು ನಗರದಲ್ಲಿ ಆರಂಭಿಸಿದ್ದು, ಜ.24 ರಂದು ಚಾಲನೆ ನೀಡಲಾಯಿತು.

 


ಕೃಷಿಕ ದಂಪತಿ ಬಾರಿಕೆ ಕೆ.ನಾರಯಣ ಭಟ್ ,ಗೀತಾ ನಾರಾಯಣ ಭಟ್ ದೀಪ ಪ್ರಜ್ವಲನೆ ನೆರವೇರಿಸೋ ಮೂಲಕ ಮಹೋತ್ಸವ ಕ್ಕೆ ಚಾಲನೆ ನೀಡಿದರು. ಕೋಟಕ್ ಮಹೀಂದ್ರಾ ಉದ್ಯೋಗಿ ಪ್ರಮೋದ್, ಭಾರತ್ ಅಟೋಕಾರ್ಸ್ ಉದ್ಯೋಗಿಗಳಾದ ಪದ್ಮನಾಭ, ಅನೂಪ್, ವಿಘ್ನೇಶ್, ಸುರೇಂದ್ರ ಉಪಸ್ಥಿತರಿದ್ದರು. ಟೀಂ ಲೀಡರ್ ಸಂತೋಷ್ ಮಾತಾನಾಡಿ, ಮಹೋತ್ಸವದಲ್ಲಿ ಕಾರುಗಳ ಪ್ರದರ್ಶನ ಜೊತೆಗೆ ವಿವಿಧ ಮಾದರಿಯ ಕಾರುಗಳ ಮೇಲೆ ಅಚ್ಚರಿ ರೀತಿಯ ಉಳಿತಾಯ ಕೊಡುಗೆ ಹಾಗೂ ಸಾಲ ಸೌಲಭ್ಯ ವ್ಯವಸ್ಥೆ, ವಿನಿಮಯ ಬೋನಸ್ ಮಾತ್ರವಲ್ಲದೇ ಹೊಸ ವರುಷದ ಉಳಿತಾಯ ರೂಪೈ 43 ಸಾವಿರದವರೆಗಿನ ಬೃಹತ್ ಲಾಭವನ್ನು ಕಾರು ಪ್ರಿಯರು ಬಾಚಿಕೊಳ್ಳಬಹುದೆಂದು ತಿಳಿಸಿದರು.

LEAVE A REPLY

Please enter your comment!
Please enter your name here