ಜೀವಕ್ಕಾಗಿ ಪರದಾಡುತ್ತಿದೆ ಈ ಜೀವ.. ನೆರವು ನೀಡುವಿರಾ?

0

ಪುತ್ತೂರು: ಕಾಸರಗೋಡು ಕೂಡ್ಲು ನಿವಾಸಿ ರವೀಂದ್ರ ನಾಯ್ಕ್ ಅವರ ಪುತ್ರ ಆರ್. ಪೂರ್ವಿಶ್ ಎಂಬವರು ಜ.೧೨ ರಂದು ರಸ್ತೆ ಅಪಘಾತಕ್ಕೆ ಈಡಾಗಿದ್ದು ಮಂಗಳೂರು ಕೆ.ಎಸ್ ಹೆಗಡೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇವರು ಚಲಾಯಿಸುತ್ತಿದ್ದ ಬುಲೆಟ್ ಬೈಕ್ ನಿಯಂತ್ರಣ ತಪ್ಪಿ ವಿವೇಕಾನಂದ ಕಾಲೇಜಿನ ದ್ವಾರದ ಬಳಿಯ ಆವರಣಗೋಡೆಗೆ ಡಿಕ್ಕಿಯಾಗಿ ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡಿದ್ದರು. ಗಂಭೀರ ಪರಿಸ್ಥಿತಿಯಲ್ಲಿರುವ ಇವರು ಸಾವು ನೋವಿನ ಮಧ್ಯೆ ಬಳಲುತ್ತಿದ್ದಾರೆ.

ಇವರ ಮನೆಯ ಪರಿಸ್ಥಿತಿಯು ತೀರ ಹದೆಗೆಟ್ಟಿದ್ದು ತಂದೆ ಕೂಡ ಅಸೌಖ್ಯದಿಂದ ಬಳಲುತ್ತಿದ್ದಾರೆ. ಪೂರ್ವಿಶ್ ಅವರ ಚಿಕಿತ್ಸೆಯನ್ನು ಮುಂದುವರಿಸಲು ಹಣದ ಅವಶ್ಯಕತೆಯಿದ್ದು, ಮನೆಯಲ್ಲಿ ದುಡಿಯುವವರು ಯಾರೂ ಇಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸಹೃದಯದ ದಾನಿಗಳು ಪೂರ್ವಿಶ್ ಅವರ ಚಿಕಿತ್ಸೆಗೆ ಸಹಾಯದ ಹಸ್ತ ನೀಡಿ ಈ ವಿದ್ಯಾರ್ಥಿಯ ಮುಂದಿನ ಭವಿಷ್ಯಕ್ಕೆ ದಾರಿಯಾಗಬಹುದು ಎಂದು ಪ್ರಕಟಣೆ ತಿಳಿಸಿದೆ.

 

Name; DEEKSHA G NAIK
Branch: CANARA BANK PUTTUR
Ac.no: 0615108084580
Ifsc code: CNRB0000615

LEAVE A REPLY

Please enter your comment!
Please enter your name here