ಭಾರೀ ಮಳೆಗೆ ಕೊಚ್ಚಿಹೋಗಿದ್ದ ಮಾರ್ಪಡ್ಕ – ಊರುಬೈಲು ಸೇತುವೆ ಸಂಚಾರಕ್ಕೆ ಮುಕ್ತ

0

 

ಶಾಸಕರ ಶಿಫಾರಸ್ಸಿನ ಮೇರೆಗೆ ಕೊಡಗು ಜಿ‌.ಪಂ. ವತಿಯಿಂದ ದುರಸ್ತಿ

ಇತ್ತೀಚಿಗೆ ಕೊಡಗು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಎರಡು ಬಾರಿ ಕೊಚ್ಚಿ ಹೋಗಿದ್ದ, ಮಾರ್ಪಡ್ಕ-ಊರುಬೈಲು ಸಂಪರ್ಕ ಸೇತುವೆಯು ವಿರಾಜಪೇಟೆ ಶಾಸಕ ಕೆ.ಜಿ. ಭೋಪಯ್ಯ ಅವರ ಶಿಫಾರಸ್ಸಿನ ಮೇರೆಗೆ ಕೊಡಗು ಜಿಲ್ಲಾ ಪಂಚಾಯತ್ ವತಿಯಿಂದ ದುರಸ್ತಿ ಪಡಿಸಲಾಗಿದ್ದು, ಇದೀಗ ಸಂಚಾರಕ್ಕೆ ಮುಕ್ತವಾಗಿದೆ.
ಕಳೆದ ಎರಡು ತಿಂಗಳುಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಎರಡು ಭಾರಿ ಸೇತುವೆಯ ಎರಡು ಬದಿಗಳಲ್ಲಿ ಮಣ್ಣು ನೀರಿನಲ್ಲಿ ಕೊಚ್ಚಿಹೋದ ಪರಿಣಾಮವಾಗಿ ಸಂಪಾಜೆಯಿಂದ ಮಾರ್ಪಡ್ಕ ಮೂಲಕ ಊರುಬೈಲಿಗೆ ಸಂಪರ್ಕ ಸೇತುವೆ ಕಡಿತಗೊಂಡಿತ್ತು.
ಇದೀಗ ಶಾಸಕ ಕೆ.ಜಿ. ಬೋಪಯ್ಯ ಅವರ ವಿಶೇಷ ಮುತುವರ್ಜಿಯಿಂದ ಸೇತುವೆಯನ್ನು ದುರಸ್ತಿಪಡಿಸಲಾಗಿದ್ದು, ಸಂಚಾರಕ್ಕೆ ಯೋಗ್ಯವಾಗಿರುವುದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here