ಕಾಣಿಯೂರು ಗ್ರಾ. ಪಂ. ನಲ್ಲಿ ಗಣರಾಜ್ಯೋತ್ಸವ – ಲಂಚ ಭ್ರಷ್ಟಾಚಾರಕ ಪ್ರತಿಕೃತಿ ದಹನ

0

ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ನಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಲಿತಾ ದರ್ಖಾಸು ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ‘ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ’ ಆಂದೋಲನದ ಅಂಗವಾಗಿ ಪ್ರತಿಕೃತಿ ದಹನ ನಡೆಯಿತು. ಗ್ರಾ. ಪಂ. ಉಪಾಧ್ಯಕ್ಷರಾದ ಗಣೇಶ್ ಉದನಡ್ಕ, ಸದಸ್ಯರಾದ ದೇವಿಪ್ರಸಾದ್ ದೋಲ್ಪಾಡಿ, ತೇಜಕುಮಾರಿ ಉದ್ಲಡ್ಡ, ಅಂಬಾಕ್ಷಿ ಕೂರೇಲು, ಪಿಡಿಓ ಕಮಲ್ ರಾಜ್, ಕಾರ್ಯದರ್ಶಿ ದೇವರಾಜ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here