ಅಂಕತಡ್ಕ : ಎಸ್‌ಡಿಪಿಐ ವತಿಯಿಂದ ಧ್ವಜಾರೋಹಣ

0

 

ಪುತ್ತೂರು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಂಕತಡ್ಕ-ಪಾಲ್ತಾಡಿ ಗ್ರಾಮ ಸಮಿತಿ ಇದರ ವತಿಯಿಂದ ೭೩ ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಅಂಕತಡ್ಕದಲ್ಲಿ ನಡೆಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್‌ಡಿಪಿಐ ಅಂಕತಡ್ಕ-ಪಾಲ್ತಾಡಿ ಗ್ರಾಮ ಸಮಿತಿ ಅಧ್ಯಕ್ಷರುಗಳಾದ ಎ.ಆರ್ ರಝಾಕ್ ಮತ್ತು ಶಾವೂದ್ ರವರು ನೆರವೇರಿಸಿದರು. ಮಸ್ಜಿದೇ ಖಿಲ್‌ರ್ ಹನಫೀ ಜುಮಾ ಮಸ್ಜಿದ್ ಅಂಕತಡ್ಕ ಇಮಾಮರಾದ ಸಯ್ಯದ್ ಸಾದಿಕುಲ್ಲಾ ಆಮೀರಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಮುಖಂಡರಾದ ರಿಯಾಝ್ ಅಂಕತಡ್ಕ ಸಂದೇಶ ಭಾಷಣ ಮಾಡಿದರು. ಎಸ್‌ಡಿಪಿಐ ಸವಣೂರು ವಲಯ ಉಪಾಧ್ಯಕ್ಷರಾದ ರಹಿಮಾನ್.ಎ, ಜೊತೆ ಕಾರ್ಯದರ್ಶಿ ಎ.ಎಸ್ ರಝಾಕ್, ಮಸ್ಜಿದೇ ಖಿಲ್‌ರ್ ಹನಫೀ ಜುಮಾ ಮಸ್ಜಿದ್ ಅಂಕತಡ್ಕ ಅಧ್ಯಕ್ಷರಾದ ಸಯ್ಯದ್ ಆರೀಫ್, ಪಿಎಫ್‌ಐ ಅಂಕತಡ್ಕ ಅಧ್ಯಕ್ಷರಾದ ಎ.ಎಸ್ ಶರೀಫ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here