ಪೈಲಾರು : ಶೌರ್ಯ ಯುವತಿ ಮಂಡಲದ ನೂತನ ಸಮಿತಿ ರಚನೆ

0

ಶೌರ್ಯ ಯುವತಿ ಮಂಡಲ (ರಿ) ಪೈಲಾರು ಇದರ ವಾರ್ಷಿಕ ಮಹಾಸಭೆ ಕಾರ್ಯ್ರಮವು ಸೆ.25 ರಂದು ಮಿತ್ರವೃಂದ ಕಟ್ಟಡ ಪೈಲಾರು ಇಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವತಿ ಮಂಡಲದ ಅಧ್ಯಕ್ಷೆ ಕುಮಾರಿ ಚರಿಷ್ಮಾ ಕಡಪಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ ಹಾಗೂ ಉದ್ಘಾಟಕರಾಗಿ ಶ್ರೀಮತಿ ಕುಸುಮಾವತಿ ಕೋಡ್ತುಗುಳಿ ಉಪಸ್ಥಿತರಿದ್ದರು.

ಶೌರ್ಯ ಯುವತಿ ಮಂಡಲದ ೨೦೨೨-೨೩ರ ನೂತನ ಸಮಿತಿ ರಚನೆಯಾಗಿದ್ದು ,ಅಧ್ಯಕ್ಷೆಯಾಗಿ ಕುಮಾರಿ ಚರಿಷ್ಮಾ ಕಡಪಳ ಪುನರಾಯ್ಕೆಗೊಂಡಿದ್ದು, ಕಾರ್ಯದರ್ಶಿಯಾಗಿ ಕುಮಾರಿ ಹಸ್ತವಿ ಮಡಪ್ಪಾಡಿ, ಕೋಶಾಧಿಕಾರಿಯಾಗಿ ಶ್ರೀಮತಿ ರಶ್ಮಿ ರಜನಿಕಾಂತ್ ಉಮ್ಮಾಡ್ಕ, ಉಪಾಧ್ಯಕ್ಷೆಯಾಗಿ ಶ್ರೀಮತಿ ರಾಜೀವಿ ಗೋಳ್ಯಡಿ,ಜತೆ ಕಾರ್ಯದರ್ಶಿಯಾಗಿ ಕುಮಾರಿ ಜಯಶ್ರೀ ಕುಳ್ಳಂಪಾಡಿ ಆಯ್ಕೆಗೊಂಡಿರುತ್ತಾರೆ.


ನಿರ್ದೇಶಕರಾಗಿ, ಶ್ರೀಮತಿ ಭವ್ಯ ಕಿರಣ್ ನಾಯಾರ್ಕಲ್ಲು, ಶ್ರೀಮತಿ ಕಮಲಾಕ್ಷಿ ಗುಡ್ಡೆಮನೆ, ಶ್ರೀಮತಿ ಶ್ವೇತಾನಾಯಾರ್ಕಲ್ಲು, ಶ್ರೀಮತಿ ಚೈತ್ರಾ ಕಡಪಳ, ಕುಮಾರಿ ಜ್ಯೋತಿ ಕಡಪಳ,ಕುಮಾರಿ ಪ್ರಜ್ಞಾ ಮಾಡಬಾಕಿಲು, ಕುಮಾರಿ ಸುಷ್ಮಿತಾ ಕಡಪಳ, ಕುಮಾರಿ ಸೌಂದರ್ಯ ಕಡಪಳ, ಕುಮಾರಿ ದಿಶಾ ಮಾಡಬಾಕಿಲು, ಕುಮಾರಿ ಅನುಜ್ಞಾಸಂಕೇಶ ಮತ್ತುಗೌರವ ಸಲಹೆಗಾರರಾಗಿ ಶ್ರೀಮತಿ ಮನೋರಮಾ ಕಡಪಳ, ಶ್ರೀಮತಿ ಕುಸುಮಾವತಿ ಕೊಡ್ತುಗುಳಿ, ಶ್ರೀಮತಿ ಭವಾನಿ ಮೊಂಟಡ್ಕ ರವರನ್ನು ಆಯ್ಕೆಮಾಡಲಾಯಿತು.

ಕಾರ್ಯಕ್ರಮದಲ್ಲಿ ಕುಮಾರಿ ಅನುಜ್ಞಾ ಸಂಕೇಶರವರು ಪ್ರಾರ್ಥಿಸಿ, ಜಯಶ್ರೀ ಕುಳ್ಳಂಪಾಡಿ ಸ್ವಾಗತಿಸಿದರು. ಹಸ್ತವಿ ಮಡಪ್ಪಾಡಿ ವಾರ್ಷಿಕ ವರದಿ ಮಂಡಿಸಿದರು. ಸೌಂದರ್ಯ ಕಡಪಳ ಬಂದಂತಹವರನ್ನು ವಂದಿಸಿ, ರಶ್ಮಿ ರಜನಿಕಾಂತ್ ಉಮ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here