ಬಾಲ್ಯೊಟ್ಟುಮಾರ್ ಶಿರೋಡಿಯನ್ ತರವಾಡು ದೈವಗಳ ನೇಮೋತ್ಸವ

0

 

ಬೆಟ್ಟಂಪಾಡಿ: ಇರ್ದೆ ಬಾಲ್ಯೊಟ್ಟುಮಾರ್ ಶಿರೋಡಿಯನ್ ತರವಾಡಿನಲ್ಲಿ ಧರ್ಮದೈವದ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ಫೆ. 26 ಮತ್ತು 27 ರಂದು ನಡೆಯಿತು.

ಫೆ. 26 ರಂದು ರಾತ್ರಿ ಕಲ್ಲಾಳ್ತಗುಳಿಗ ದೈವದ ನೇಮ, ಅನ್ನಸಂತರ್ಪಣೆ, ವರ್ಣರ ಪಂಜುರ್ಲಿ ದೈವದ ನೇಮ, ಕುಪ್ಪೆ ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವದ ನೇಮ, ಕೊರಗಜ್ಜ ದೈವದ ನೇಮ ನಡೆಯಿತು.

ಫೆ. 27 ರಂದು ಬೆಳಿಗ್ಗೆ ಧರ್ಮದೈವ ಧೂಮಾವತಿ ನೇಮ, ಮಧ್ಯಾಹ್ನ – ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು. ಕುಟುಂಬದ ಹಿರಿಯರಾದ ನರಸಿಂಹ ಪೂಜಾರಿ ಬೊಳ್ಳಿಂಬಲ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಬಂಬ್ರಾಣ ಕೊಟ್ಯದ ಮನೆ ನಾರಾಯಣ ಪೂಜಾರಿ, ಅಧ್ಯಕ್ಷ ಶೇಷಪ್ಪ ಪೂಜಾರಿ ಪಳಂಬೆ, ಕಾರ್ಯದರ್ಶಿ ಅವಿನಾಶ್ ಹಾರಾಡಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂಕಪ್ಪ ಸುವರ್ಣ ಬಾಡೂರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಕುಟುಂಬಿಕರು, ಬಂಧುಗಳು ಪಾಲ್ಗೊಂಡರು.

 

ಇದೇ ವೇಳೆ ತರವಾಡು ವತಿಯಿಂದ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಜಯಂತ ನಡುಬೈಲು, ದೈವ ಮಧ್ಯಸ್ಥ ಶಶಾಂಕ್ ನೆಲ್ಲಿತ್ತಾಯ, ತರವಾಡು ನಿರ್ಮಾಣದ ಜಮೀನು ನೀಡಿ ಸಹಕರಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.

 

 

 

 

LEAVE A REPLY

Please enter your comment!
Please enter your name here