ಕೂತ್ಕುಂಜ ಗ್ರಾಮದ ಬಳ್ಪ ಸಮೀಪದ ಕಿನ್ನಿಕುಮೇರಿ
ದಿ. ಚಿನ್ನಮ್ಮ ಶೇಷಪ್ಪ ಗೌಡ ಇವರ ವೈಕುಂಠ ಸಮಾರಾಧನೆ ಅವರ ಸ್ವಗ್ರಹ ಕಿನ್ನಿಕುಮೇರಿ
ಮನೆಯಲ್ಲಿ ಅ.9 ರಂದು ನಡೆಯಿತು.
ಪುತ್ರ ನಾಗೇಶ್ ಗೌಡ ಕಿನ್ನಿಕುಮೇರಿ ದೀಪವನ್ನು ಬೆಳಗಿಸಿದರು.
ಮೃತರ ಕುಟುಂಬದ ಪರಿಚಯ ಹಾಗೂ ಅವರು ಜೀವನದಲ್ಲಿ ನಡೆದುಕೊಂಡು ಬಂದ ಆದರ್ಶಗಳನ್ನು,ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಒಡನಾಟವನ್ನು ಎಳೆ ಎಳೆಯಾಗಿ ಬಿಡಿಸಿ ಅವರ ಬಗ್ಗೆ ಅಳಿಯ ವಿಶ್ವನಾಥ ನಡುತೋಟ ತಿಳಿಸಿದರು.
ಅಳಿಯಂದಿರಾದ ರುಕ್ಮಯ್ಯ ಗೌಡ ಮೂಕಮಲೆ, ಮುತ್ತಪ್ಪ ಗೌಡ ಬೂದಿಪಳ್ಳ, ಹೈಕೋರ್ಟ್ ವಕೀಲ ಧರ್ಮಪಾಲ ಎಣ್ಣೆಮಜಲು
ನುಡಿನಮನ ಸಲ್ಲಿಸಿದರು.
ಸಭೆಯಲ್ಲಿ ನೆರೆದಿದ್ದವರು ಮೌನ ಪ್ರಾರ್ಥನೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು .