ಗುತ್ತಿಗಾರಿನಲ್ಲಿ ಗುಡುಗು ಮಿಂಚು ಸಹಿತ ವಿಪರೀತ ಮಳೆಯಾಗಿದ್ದು ಮಣಿಯಾನದಲ್ಲಿ ಮನೆಗೆ ಸಿಡಿಲು ಬಿದ್ದು ಅಪಾರ ನಷ್ಟವುಂಟಾದ ಘಟನೆ ಅ.11 ರಂದು ನಡೆದಿದೆ.
ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಮಣಿಯಾನ ಪುರುಷೋತ್ತಮರವರ ಮನೆಗೆ ಸಿಡಿಲು ಬಿದ್ದು ವಿದ್ಯುತ್ ಮೀಟರ್, ಸ್ವಿಚ್ ಬೋರ್ಡ್ ಗಳು ಸುಟ್ಟುಹೋಗಿವೆ.
ಸರ್ವಿಸ್ ವಯರ್ ಸುಟ್ಟುಹೋಗಿದೆ.
ಅಲ್ಲದೆ ಮನೆಯ ಹತ್ತಿರವಿದ್ದ ಹಟ್ಟಿಯ ಗೋಡೆಯ ಕರ್ಗಲ್ಲು ಚಲ್ಲಾಪಿಲ್ಲಿಯಾಗಿದೆ.
ಗೋಡೆಗೂ ಹಾನಿಯಾಗಿದೆ.
ಅಲ್ಲದೆ ಸಿಡಿಲಿನ ರಭಸಕ್ಕೆ ಹಟ್ಟಿಯ ಸಮೀಪ ಹೊಂಡ ನಿರ್ಮಾಣವಾಗಿದ್ದು , ಗೋಡೆಯ ಕಂಬ ಇನ್ನಿತರ ವಸ್ತುಗಳಿಗೂ ಹಾನಿಯಾಗಿದ್ದು ಅಪಾರ ನಷ್ಟವುಂಟಾಗಿರುವುದಾಗಿ ತಿಳಿದು ಬಂದಿದೆ.