ಕಲ್ಲಪ್ಪಳ್ಳಿ : ಬಜೆಟ್ ಅನುದಾನದ 5 ಕೋಟಿ ರೂಪಾಯಿ ಮೊತ್ತದ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

0

 

ಬಾಟೋಳಿ-ಕಮ್ಮಾಡಿ ರಸ್ತೆ ಕಾಮಗಾರಿಗೆ ಪನತ್ತಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಸನ್ನ ಪ್ರಸಾದ್ ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದರು.

 

ಕಲ್ಲಪಳ್ಳಿ ಪ್ರದೇಶದ ಜನರ ಬಹುಕಾಲದ ನಿರೀಕ್ಷೆಯ
ಬಾಟೋಳಿ-ಕಮ್ಮಾಡಿ ರಸ್ತೆಯ ಅಭಿವೃದ್ಧಿಗೆ ಕೇರಳ ಸರಕಾರದ ಬಜೆಟ್ ನಲ್ಲಿ ಮೀಸಲಿರಿಸಿದ್ದ 5 ಕೋಟಿ ರೂಪಾಯಿ ಮೊತ್ತದ ರಸ್ತೆಯ ಕಾಮಗಾರಿ, ಕರ್ನಾಟಕ-ಕೇರಳ ಗಡಿಪ್ರದೇಶದ ಬಾಟೋಳಿಯಿಂದ ಕಮ್ಮಾಡಿ ತನಕ 5 ಕಿ.ಮಿ‌. ರಸ್ತೆ ಅಭಿವೃದ್ಧಿಯಾಗಲಿದೆ. ರಸ್ತೆಯ ಅಗಲೀಕರಣ, ಮೋರಿಗಳು, ಕಾಂಕ್ರೀಟ್ ಚರಂಡಿ, ಇನ್ನಿತರ ಕಾಮಗಾರಿ ಮತ್ತು, ರಸ್ತೆಯಲ್ಲಿ 3.80 ಮೀಟರ್ ಅಗಲ ಡಾಮರೀಕರಣ ನಡೆಯಲಿದೆ.

ಈ ಮೊದಲು
ಇದೇ ರಸ್ತೆಯ ಹಂದಿಪಾರೆ ಎಂಬಲ್ಲಿ ಹೊಳೆಗೆ ಕಾಞಂಗಾಡ್ ಶಾಸಕ ಇ.ಚಂದ್ರಶೇಖರನ್ ಅವರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ 98 ಲಕ್ಷ ಅನುದಾನದಲ್ಲಿ ಸೇತುವೆ ನಿರ್ಮಾಣ ಅಂತಿಮ ಅಂತದಲ್ಲಿ ಇದೆ, ರಸ್ತೆಗೆ ಮೊತ್ತ 5ಕೋಟಿ 98 ಲಕ್ಷ ಅನುದಾನದಲ್ಲಿ ರಸ್ತೆ ವಾಹನ ಸಂಚಾರಕ್ಕೆ ಸುಗಮವಾಗಲಿದೆ.
ರಸ್ತೆ ಕಾಮಗಾರಿಗೆ ಚಾಲನೆಯನ್ನು ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪ್ರಸನ್ನ ಪ್ರಸಾದ್ ನೀಡಿದರು. ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಪಿ.ಯಂ. ಕುರಿಯಾಕೋಸ್ ಅಧ್ಯಕ್ಷತೆ ವಹಿಸಿದ್ದರು.
ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ, ಪಂಚಾಯತ್ ಕಾರ್ಯದರ್ಶಿ ಸುರೇಶ್ ಕುಮಾರ್, ಮಾಜಿ ಪಂಚಾಯತ್ ಸದಸ್ಯರಾದ ನಳಿನಾಕ್ಷಿ ಯಂ.ಡಿ, ಮತ್ತು ಲಿಸ್ಸಿ ಜಾನ್, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ಪ್ರಮುಖರಾದ ನಂದಕುಮಾರ್ ಬಾಟೋಳಿ, ಜಯಪ್ರಕಾಶ್ ಎನ್.ಕೆ, ಚಿದಾನಂದ ಗರುಗುಂಜ, ಜಯಪ್ರಕಾಶ್ ಪೆರುಮುಂಡ, ಮಹೇಶ್ ಗರುಗುಂಜ ರವರು ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಕಲ್ಲಪಳ್ಳಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here