ಅ.26 ರಂದು ಗುತ್ತಿಗಾರಿನಲ್ಲಿ ಶ್ರೀ ಮಂಗಳಾ ಎಂಟರ್ ಪ್ರೈಸಸ್ ಮತ್ತು ಡ್ರೈವಿಂಗ್ ಸ್ಕೂಲ್ ಶುಭಾರಂಭ

0

 

 

ಸುಳ್ಯದ ದ್ವಾರಕಾ ಹೋಟೆಲ್ ಬಳಿಯ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಅರಂತೋಡು ಕನ್ನಡ್ಕ ಕಿರ್ಲಾಯದ ಸ್ವಾತಿಕ್ ಕೆ.ಎಲ್ ಮಾಲಕತ್ವದ ಶ್ರೀ ಮಂಗಳಾ ಡ್ರೈವಿಂಗ್ ಸ್ಕೂಲ್ ಇದರ ಇನ್ನೊಂದು ಸಂಸ್ಥೆ ಗುತ್ತಿಗಾರಿನ ನಿವೇದಿತಾ ಸಂಕೀರ್ಣದಲ್ಲಿ ಶ್ರೀ ಮಂಗಳಾ ಎಂಟರ್ ಪ್ರೈಸಸ್ ಅ.26 ರಂದು ಶುಭಾರಂಭಗೊಳ್ಳಲಿದೆ.

ಸಂಸ್ಥೆಯನ್ನು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಮಹಾಬಲೇಶ್ವರ ಭಟ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಮುತ್ತಪ್ಪ ತಿರುವಪ್ಪ ದೇವಸ್ಥಾನದ ಮೊಕ್ತೇಸರ ವೆಂಕಟ್ ವಳಲಂಬೆ, ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗುತ್ತಿಗಾರು ಬಿ.ಎಂ.ಎಸ್ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಧರ್ಮಪಾಲ ಪಿ.ಎಂ, ಕೊಲ್ಲಮೊಗ್ರ ಗ್ರಾ.ಪಂ ಅಧ್ಯಕ್ಷ ಉದಯಕುಮಾರ್ ಕೊಪ್ಪಡ್ಕ, ಗುತ್ತಿಗಾರು ಚರ್ಚ್ ಧರ್ಮಗುರು ಫಾ.ಆದರ್ಶ್ ಜೋಸೆಫ್, ಯುವ ತೇಜಸ್ಸು ಟ್ರಸ್ಟ್ ನ ಗುರುಪ್ರಸಾದ್, ಅಮರಸೇನಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ, ನಿವೇದಿತಾ ಸಂಕೀರ್ಣದ ಮಾಲಕ ವಚನ್ ಡಿ.ಪಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here