ಅಧ್ಯಕ್ಷ : ಕೆ.ಹರೀಶ್ ಆಚಾರ್ಯ, ಕಾರ್ಯದರ್ಶಿ: ಎಸ್.ರವಿ ಆಚಾರ್ಯ, ಕೋಶಾಧಿಕಾರಿ: ಪುಷ್ಪರಾಜ್
ಪುತ್ತೂರು : ಕೃಷ್ಣನಗರ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜಾ ಸೇವಾ ಸಮಿತಿಯ ೪೦ನೇ ವರ್ಷದ ಸತ್ಯನಾರಾಯಣ ಪೂಜೆಯ ಪೂರ್ವಭಾವಿ ಸಭೆ ಕೃಷ್ಣನಗರ ಕಟ್ಟೆಯ ವಠಾರದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷರಾಗಿ ಕೆ.ಹರೀಶ್ ಆಚಾರ್ಯ, ಕಾರ್ಯದರ್ಶಿಯಾಗಿ ಎಸ್.ರವಿ ಆಚಾರ್ಯ, ಕೋಶಾಧಿಕಾರಿಯಾಗಿ ಪುಸ್ಪರಾಜ್ರವರನ್ನು ಆಯ್ಕೆ ಮಾಡಲಾಯಿತು. ಮಾಜಿ ಅಧ್ಯಕ್ಷ ವೇಣುಗೋಪಾಲ್ ಕೃಷ್ಣನಗರ, ಪುರಸಭಾ ಮಾಜಿ ಸದಸ್ಯ ಉದಯ ಕುಮಾರ್ ಆಚಾರ್ಯ, ಡೀಕಯ್ಯ ಪೂಜಾರಿ, ಪ್ರಶಾಂತ್ ಕೃಷ್ಣನಗರ, ದಿನೇಶ್ ಆಚಾರ್ಯ, ಮೋಹನ್ ಸಿ.ಎಚ್., ನಾರಾಯಣ ಗೌಡ, ದೇವಪ್ಪ ಕುಲಾಲ್, ಉದಯ ಆಚಾರ್ಯ, ಈಶ್ವರ ನಾಯ್ಕ, ಸಂಜೀವ ಕುಲಾಲ್, ಉದಯ ಗೌಡ, ಅಶೋಕ್ ಭಂಡಾರಿ ಉಪಸ್ಥಿತರಿದ್ದರು. ರವಿ ಆಚಾರ್ಯ ಸ್ವಾಗತಿಸಿದರು. ಪುಷ್ಪರಾಜ್ ವಂದಿಸಿದರು.