ಜಯನಗರ : ವಿಕ್ರಮ ಯುವಕ ಮಂಡಲದ ಮಹಾಸಭೆ ಮತ್ತು ನೂತನ ಸಮಿತಿ ರಚನೆ

0

 

ವಿಕ್ರಮ ಯುವಕ ಮಂಡಲ ಜಯನಗರ ಸುಳ್ಯ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆ ಇಂದು ಸಂಘದ ಸಭಾಭವನದಲ್ಲಿ ನಡೆಯಿತು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಕ್ರಮ ಯುವಕ ಮಂಡಲದ ಅಧ್ಯಕ್ಷ ಪ್ರಸನ್ನ ವಹಿಸಿದ್ದರು.


ಕಳೆದ ಸಾಲಿನ ವರದಿ ಮತ್ತು ಲೆಕ್ಕಪತ್ರವನ್ನು ಸಮಿತಿ ಪದಾಧಿಕಾರಿ ರಂಜಿತ್ ಕುಮಾರ್ ಮಂಡಿಸಿದರು.
ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಯುವಕ ಮಂಡಲದ ವತಿಯಿಂದ ನಡೆಸಲ್ಪಡುವ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆಗಳು ನಡೆದು ಸಲಹೆ ಸೂಚನೆಗಳನ್ನು ಪಡೆಯಲಾಯಿತು.
ನಂತರ ನೂತನ ಸಮಿತಿ ಯನ್ನು ರಚಿಸಿ ಅಧ್ಯಕ್ಷರಾಗಿ ರಂಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ದೀಕ್ಷಿತ್ ಜಯನಗರ, ಕೋಶಾಧಿಕಾರಿಯಾಗಿ ಅಭಿಷೇಕ್, ಉಪಾಧ್ಯಕ್ಷರಾಗಿ ಸಚಿನ್ ಕಾಮತ್, ಜೊತೆ ಕಾರ್ಯದರ್ಶಿಯಾಗಿ ಅಭಿರಾಮ್, ಕ್ರೀಡಾ ಕಾರ್ಯದರ್ಶಿಯಾಗಿ ರೋಷನ್ ಪ್ರಭು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್, ನಿರ್ದೇಶಕರುಗಳಾಗಿ ಪ್ರವೀಣ್ ಕುಮಾರ್ ಎ ಎಂ, ಸುರೇಂದ್ರ ಕಾಮತ್, ಅಮಿತ್ ಕುಮಾರ್, ದೀಕ್ಷಿತ್ ರಾವ್, ಜಯರಾಮ, ತೇಜಸ್, ಇವರನ್ನು ಆಯ್ಕೆ ಮಾಡಲಾಯಿತು.
ರಂಜಿತ್ ಕುಮಾರ್ ಸ್ವಾಗತಿಸಿ ದೀಕ್ಷಿತ್ ಜಯನಗರ ವಂದಿಸಿದರು.

LEAVE A REPLY

Please enter your comment!
Please enter your name here