ಸುಳ್ಯದಲ್ಲಿ ಅಖಂಡ ಭಾರತಕ್ಕಾಗಿ ಒಂದು ದೀಪ ಕಾರ್ಯಕ್ರಮ
ಸುಳ್ಯ ತಾಲೂಕು ಯುವಾ ಬ್ರಿಗೇಡ್ ಇದರ ವತಿಯಿಂದ ಅಖಂಡ ಭಾರತಕ್ಕಾಗಿ ಒಂದು ದೀಪ ಕಾರ್ಯಕ್ರಮವು ಅ.24ರಂದು ಸಂಜೆ ಸುಳದಯ ಚೆನ್ನಕೇಶವ ದೇವಸ್ಥಾನದ ಮುಂಭಾಗ ನಡೆಯಿತು.
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ಹಾಗೂ ಹಿರಿಯ ದೈವ ಸೇವಕರಾದ ಕೇಪು ಅಜಿಲ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ , ಯುವಾ ಬ್ರಿಗೇಡ್ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಮನೀಶ್ ಗೂನಡ್ಕ , ಯುವಾ ಬ್ರಿಗೇಡ್ ಸುಳ್ಯ ತಾಲೂಕು ಸಂಚಾಲಕ ಕಿಶೋರ್, ಕೇಶವ ನಾಯಕ್ , ಲೋಕೇಶ್ ಕೆರೆಮೂಲೆ , ಸತೀಶ್ ಕಾಟೂರು ಹಾಗೆ ಯುವಾ ಬ್ರಿಗೇಡ್ ನ ಎಲ್ಲಾ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು .