ಕಡವೆ ಹಾಯ್ದು ರಿಕ್ಷಾ ಪಲ್ಟಿ ಹೊಡೆದು, ರಿಕ್ಷಾದಲ್ಲಿದ್ದ ಜಯಪ್ರಕಾಶ್ ಎಂಬವರಿಗೆ ಗಂಭೀರ ಗಾಯವಾದ ಘಟನೆ ಐನೆಕಿದುನಲ್ಲಿ ವರದಿಯಾಗಿದೆ.
ಐನೆಕಿದುವಿನ ಕತ್ತಿಮಜಲಿಗೆ ಆಗಮಿಸಿದ್ದ ರಮೇಶ್ ಎಂಬವರ ರಿಕ್ಷಾದಲ್ಲಿ ಜಯಪ್ರಕಾಶ್ ಕತ್ತಿಮಜಲು ಮತ್ತು ಪುಟ್ಟಣ್ಣ ಕತ್ತಿಮಜಲು ಎಂಬವರು ದೀಪಾವಳಿ ಕಾರ್ಯಕ್ರಮ ಮುಗಿಸಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿರುವಾಗ ಐನೆಕಿದು ಮಲಯಾಳ ರಸ್ತೆಯ ಐನೆಕಿದು ಶಾಲಾ ಭಳಿಯಿಂದ ಮಂದೆ ಹೋದಾಗ ಕಾಡನ ರಸ್ತೆಯಲ್ಲಿ ಕಡವೆ ರಸ್ತೆಗೆ ಬಂದು ರಿಕ್ಷಾಕ್ಕೆ ಗುದ್ದಿದೆ. ಪರಿಣಾಮ ರಿಕ್ಷಾ ಪಲ್ಟಿಯಾಗಿ ಬಿದ್ದಿದೆ, ಪರಿಣಾಮ ರಿಕ್ಷದ ಹಿಂಬದಿ ಸವಾರರಾದ ಜಯಪ್ರಕಾಶ್ ಎಂಬ ಯುವಕನಿಗೆ ಗಂಭೀರ ಗಾಯವಾಗಿದ್ದು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಕ್ಷಾದಲ್ಲಿದ್ದ ಪುಟ್ಟಣ್ಣ ಎಂಬವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ರಮೇಶ್ ಕೂಡ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮಹಜರು ನಡೆಸಿರುವುದಾಗಿ ತಿಳಿದು ಬಂದಿದೆ. ಜಯಪ್ರಕಾಶ್ ಅವರಿಗೆ ಸೊಂಟದ ಭಾಗಕ್ಕೆ ಗಂಭೀರವಾಗಿ ಹಾಗೂ ಕಾಲಿಗೆ ಬಲವಾದ ಏಟು ಬಿದ್ದಿರುವುದಾಗಿ ತಿಳಿದು ಬಂದಿದೆ.