ಕೆಂಪೇ ಗೌಡ ಪ್ರತಿಮೆ: ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ರಥ ನಾಳೆ, ನಾಡಿದ್ದು ಸುಳ್ಯ ತಾಲೂಕಿನಲ್ಲಿ ಸಂಚಾರ

0

 

ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ನಾಡಪ್ರಭು ಕೆಂಪೇ ಗೌಡ ಕಂಚಿನ ಪ್ರತಿಯೆಯ ಹಿನ್ನೆಲೆಯಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ರಾಜ್ಯದಾದ್ಯಂತ ನಡೆಯುತ್ತಿದ್ದು, ಈ ಅಭಿಯಾನ ರಥವು ನ.1 ಮಂಗಳವಾರ ಮತ್ತು ನ.2 ಬುಧವಾರದಂದು ಸುಳ್ಯ ತಾಲೂಕಿನಲ್ಲಿ ಸಂಚರಿಸಲಿದೆ.

 

ನ.1 ರಂದು ಬೆಳಿಗ್ಗೆ 9.30ಕ್ಕೆ ಹರಿಹರಪಲ್ಲತ್ತಡ್ಕದಿಂದ ಆರಂಭಗೊಳ್ಳುವ ರಥ ಸಂಚಾರವು ಬಳಿಕ ಗುತ್ತಿಗಾರು, ಪಂಜ, ಬೆಳ್ಳಾರೆ ಕೇಂದ್ರಗಳ ಮೂಲಕ ಸುಳ್ಯ ಚೆನ್ನಕೇಶವ ದೇಗುಲದ ಬಳಿಗೆ ಬರಲಿದೆ.

ನ. 2 ಬುಧವಾರದಂದು ಉಬರಡ್ಕಮಿತ್ತೂರು, ಮರ್ಕಂಜ, ಅರಂತೋಡು, ಸಂಪಾಜೆ, ಜಾಲ್ಸೂರು ಕೇಂದ್ರಗಳಲ್ಲಿ ಸಂಚರಿಸಲಿದೆ.

ಎಲ್ಲ ಕಡೆ ಆಯಾ ಪರಿಸರದ ಪಂಚಾಯತ್ ಗಳವರು ಸ್ವಾಗತಿಸಿ ಬರಮಾಡಿಕೊಂಡು ಮೃತ್ತಿಕೆ ಸಮರ್ಪಣೆ ನಡೆಯಲಿದೆ ಎಂದು ತಹಶೀಲ್ದಾರ್ ಅನಿತಾಲಕ್ಷ್ಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here