ಹುಕ್ರಪ್ಪ ಕಂಡಿಕಟ್ಟರಿಗೆ ಆಸರೆ ತಂಡದಿಂದ ಧನ‌ ಸಹಾಯ

0

 

 

ಸಾರ್ವಜನಿಕ ದೇವತಾರಾಧನಾ
ಸಮಿತಿ ಬಾಳಿಲ ಮುಪ್ಪೇರ್ಯ ಇದರ ಸದಸ್ಯ‌ ಹುಕ್ರಪ್ಪ‌ ಕಂಡಿಕಟ್ಟ‌ರವರ ಅನಾರೋಗ್ಯ ನಿಮಿತ್ತ ‌ಆಸರೆ ತಂಡ‌ ಸುಬ್ರಹ್ಮಣ್ಯ ಇವರು ವೇಷ ಧರಿಸಿ ಸಂಗ್ರಹಿಸಿ‌ದ‌ ಹಣ ರೂ. 47,130‌ನ್ನು ತಂಡದ ಅಧ್ಯಕ್ಷ ‌ ಅಶೋಕ್‌ ಯೇನೆಕಲ್ಲು ಹುಕ್ರಪ್ಪ ಕಂಡಿಕಟ್ಟರವರಿಗೆ ಅ. 31ರಂದು ಹಸ್ತಾಂತರಿಸಿದರು. ‌ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿಯ‌ ಗೌರವಾಧ್ಯಕ್ಷರಾದ ‌ರಾಧಾಕೃಷ್ಣ‌ ರಾವ್‌ ಉಡುವೆಕೊಡಿ‌, ಕಾರ್ಯಾಧ್ಯಕ್ಷ ಸುಧಾಕರ್ ‌ರೈ ‌ ಎ‌.ಎಂ, ಅಧ್ಯಕ್ಷ ಶೇಷಪ್ಪ ‌ಪರವ‌ ಬಾಳಿಲ‌, ಆಸರೆ ತಂಡದ ಪುರುಷೋತ್ತಮ ಸುಬ್ರಹ್ಮಣ್ಯ, ‌ ಸುದರ್ಶನ ‌ ಮುಪ್ಪೇರ್ಯ, ಶೀನಪ್ಪ‌ ಹೊನ್ನಡ್ಕ‌, ಉಮೇಶ್‌ ಕಾಪುತಡ್ಕ‌, ನಾಗೇಶ್ ‌ಬಾಳಿಲ‌, ಹೇಮಂತ್ ‌ಬಾಳಿಲ‌, ‌ಸುದರ್ಶನ ‌ ಬಾಳಿಲ‌ ‌ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here