ಕೆವಿಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ” ಸ್ವರಕ್ಷಣ” ತರಬೇತಿ ಕಾರ್ಯಕ್ರಮ.

0

ಕೆವಿಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ “ಸ್ವರಕ್ಷಣ” ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ “ಸ್ವರಕ್ಷಣ” ಮಹಿಳಾ ಟ್ರಸ್ಟ್” ಇದರ ಸಿ ಇ ಓ ಕಾರ್ತಿಕ್ ಎಸ್ ಕಟೀಲ್ ಹಾಗೂ ಶ್ರೀಮತಿ ಶೋಭಾಲತ  ಇವರು ವಿದ್ಯಾರ್ಥಿಗಳಿಗೆ “ಸ್ವರಕ್ಷಣ  ” ತರಬೇತಿಯನ್ನು ನೀಡಿದರು. ಕು.ಮಾನ್ಯ ಹಾಗೂ ಬೃಂದ ಸುರೇಶ್ ರವರು ಅತಿಥಿಗಳನ್ನು ಪರಿಚಯಿಸಿದರು.ವರ್ಷಿಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು, ಸಾನಿಧ್ಯ ಬಿಎಸ್ ಅವರು  ಸ್ವಾಗತಿಸಿ, ಸಿಂಚನ   ವಂದನಾರ್ಪಣೆಗೈದರು.

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭದ್ರತೆಯ ದೃಷ್ಟಿಯಿಂದ ಸ್ವಯಂ ರಕ್ಷಣಾ ಅನಿವಾರ್ಯ ಎನಿಸಿದೆ.ಅಂತರ್ಜಾಲ ಅಪರಾಧ (cyber crime ) ಗಳು ದಿನೇ ದಿನೇ ಹೆಚ್ಚುತ್ತಿದ್ದು ವಿದ್ಯಾರ್ಥಿಗಳ ಸುರಕ್ಷತೆ ಅಪಾಯದ ಅಂಚಿನಲ್ಲಿದೆ ಅಂತಹ ಸಂದರ್ಭಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ  ಇಂತಹ ಅತ್ಯುತ್ತಮ ಕಾರ್ಯಕ್ರಮವನ್ನು ಆಯೋಜಿಸಿರುವ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ. ವಿ ಹಾಗೂ ಕಾಲೇಜಿನ ಸಿ ಇ ಓ ಡಾ. ಉಜ್ವಲ್ ಯು ಜೆ ಇವರಿಗೆ ಪ್ರಾಂಶುಪಾಲರಾದ ಡಾ ಯಶೋದಾ ರಾಮಚಂದ್ರರವರು ಅಭಿನಂದಿಸಿ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್  ಹಾಗೂ ಎಲ್ಲಾ ಬೋಧಕ ಬೋಧಕೇತರ  ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here