ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ, ತಬಲಾವಾದಕ ಶಿವಜಿತ್ ವೈ ಜೆ ಅವರಿಗೆ ಸನ್ಮಾನ

0

ಪುತ್ತೂರು: ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮುಗೇರು ಸವಣೂರು ಇದರ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ,ಶ್ರೀ ಮಹಾವಿಷ್ಣು ಭಜನಾ ಮಂಡಳಿ ಮುಗೇರು ಸವಣೂರು ಇದರ ವತಿಯಿಂದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕೊಂಡಾಡಿಕೊಪ್ಪ ಶಾಲೆಯ ಶಿಕ್ಷಕ ಜಯಂತ್ ವೈ ಮತ್ತು ತಬಲಾವಾದಕ ಶಿವಜಿತ್ ವೈ ಜೆ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸೀತಾರಾಮ ರೈ ಸವಣೂರು, ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ,ಸದಸ್ಯರಾದ ಶಿವರಾಮ ಗೌಡ ಮೆದು ಆಶಾ ಕಂಪ,ಮೋನಪ್ಪ ಗೌಡ ಸವಣೂರು ವಿಷ್ಣುಮೂರ್ತಿ ದೇವಸ್ಥಾನದ ವೆಂಕಪ್ಪ ಶೆಟ್ಟಿ ಸವಣೂರು ಗುತ್ತು ಸವಣೂರು,ಸದಾಶಿವ ರೈ ಮುಗೇರುಗುತ್ತು ಮೊಕ್ತೇಸರರಾದ ನವೀನ್ ಕುಮಾರ್ ಶೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ತಾರಾನಾಥ ಕಾಯರ್ಗ,ಭಜನಾ ಮಂಡಳಿ ಅಧ್ಯಕ್ಷರಾದ ದಿವಾಕರ,ಸದಸ್ಯರಾದ ರಾಜೇಶ್ ರೈ ಮುಗೇರು,ಶ್ರೀಧರ ಇಡ್ಯಾಡಿ,ಜಗದೀಶ ಇಡ್ಯಾಡಿ,ದಿವಾಕರ ಬಸ್ತಿ ಕೀರ್ತನ್ ಕೋಡಿಬೈಲು ಚಂದ್ರಶೇಖರ ಮೆದು,ಯೋಗೀಶ್ ಕಾಯರ್ಗ ಹರೀಶ್ ಕುಕ್ಕುಜೆ ಜೀವನ್ ಅಶ್ವಥ್ ಹರೀಶ್ ಮಡಿವಾಳ ಪುಷ್ಪಾವತಿ ಕೇಕುಡೆ ವಸಂತಿ ಮೆದು ಮೊದಲಾದವರು ಉಪಸ್ಥಿತರಿದ್ದರು.ರಾಜೇಶ್ ರೈ ಮುಗೇರು ಸ್ವಾಗತಿಸಿ ವಂದಿಸಿದರು.ರಾಜೇಶ್ ಇಡ್ಯಾಡಿ ನಿರೂಪಿಸಿದರು

LEAVE A REPLY

Please enter your comment!
Please enter your name here