ಪುತ್ತೂರು: ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಸತ್ಯನಾರಾಯಣನಗರ ಉರ್ಲಾಂಡಿ ಚಾಂದ್ರಮಾನ ಯುಗಾದಿ ಪ್ರಯುಕ್ತ ಶ್ರೀ ಸತ್ಯನಾರಾಯಣ ದೇವರ ಪುನರ್ ಪ್ರತಿಷ್ಠೆ, 50ನೇ ವರ್ಷದ ಸತ್ಯನಾರಾಯಣ ಪೂಜೆಯು ಏ.02ರಂದು ನಡೆಯಲಿರುವುದು.
ಬೆಳಿಗ್ಗೆ ಗಣಪತಿ ಹೋಮ, ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶ್ರೀದೇವರನ್ನು ಬಾಲಾಲಯದಿಂದ ಗರ್ಭಗುಡಿಗೆ ತರುವ ಕಾರ್ಯಕ್ರಮ ಬಳಿಕ ಶ್ರೀ ಸತ್ಯನಾರಾಯನ ಸ್ವಾಮಿಯ ಪುನರ್ ಪ್ರತಿಷ್ಠಾಪನೆ, ಶಿಖರ ಪ್ರತಿಷ್ಠೆ, ಅಶ್ವತ್ಥ ಪೂಜೆ, ಸಂಜೆ ಕಲಶ ಪ್ರತಿಷ್ಠೆ, ರಾತ್ರಿ ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ಮಹಾಪೂಜೆ ಜರಗಲಿರುವುದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.