ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯಲ್ಲಿ ಎ.17ರ ಬ್ರಹ್ಮರಥೋತ್ಸವದಂದು ವರ್ಷಂಪ್ರತಿಯಂತೆ ಶ್ರೀ ಸತ್ಯಸಾಯಿ ಸೇವಾ ಮಂದಿರದಿಂದ 41ನೇ ವರ್ಷದ ಮಜ್ಜಿಗೆ ನೀರು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಜ್ಜಿಗೆ ನೀರು ವಿತರಣಾ ಕಾರ್ಯಕ್ರಮವನ್ನು ಭಗವಾನ್ ಸತ್ಯಸಾಯಿ ಬಾಬಾ ಅವರ ಭಾವ ಚಿತ್ರದ ಎದುರು ಇರಿಸಿದ ಮಜ್ಜಿಗೆಯನ್ನು ಕಟಾರಕ್ಕೆ ಸುರಿಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಐತ್ತಪ್ಪ ನಾಯ್ಕ್, ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪ್ರಸನ್ನ ಎನ್ ಭಟ್, ಸತ್ಯ ಸಾಯಿ ಸೇವಾ ಸಮಿತಿಯ ಪದ್ಮನಾಭ ನಾಯಕ್, ಬೈಂದೂರು ಪ್ರಭಾಕರ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷ ಡಾ. ಸತ್ಯ ಸುಂದರ ರಾವ್, ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಸಂಚಾಲಕ ರಘುನಾಥ ರೈ, ಶಿವಾನಂದ ಕಜೆ, ಡಾ. ಶಶಿಧರ್ ಕಜೆ ಸೇರಿದಂತೆ ಹಲವಾರು ಮಂದಿ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.