ಪುತ್ತೂರು : ಕಬಕ ಕೂವೆತ್ತಿಲ ಶ್ರೀಆದಿಶಕ್ತಿ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ವರ್ಕಾಡಿ ಬ್ರಹ್ಮಶ್ರೀ ವೇ.ಮೂ. ದಿನೇಶಕೃಷ್ಣ ತಂತ್ರಿ ಮತ್ತು ವೇ.ಮೂ. ಉಂಡೆಮನೆ ಶ್ರೀಕೃಷ್ಣ ಭಟ್ರವರ ನೇತೃತ್ವದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ, 108 ತೆಂಗಿನಕಾಯಿ ಗಣಪತಿ ಹವನ ಮತ್ತು ಶ್ರೀರಂಗಪೂಜೆ ಎ.30 ಹಾಗೂ ಮೇ.1ರಂದು ನಡೆಯಲಿದೆ.
ಎ.30ರಂದು ಬೆಳಿಗ್ಗೆ 9ರಿಂದ ಸಾಮೂಹಿಕ ಪ್ರಾರ್ಥನೆ, ಶ್ರೀಮಹಾಗಣಪತಿ ದೇವರಿಗೆ 108 ತೆಂಗಿನಕಾಯಿ ಗಣಪತಿ ಹವನ, ಮಧ್ಯಾಹ್ನ ಗಣಪತಿ ಹವನ ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 7ರಿಂದ ಶ್ರೀಮಹಾಗಣಪತಿ ದೇವರಿಗೆ ರಂಗಪೂಜೆ, ಅತ್ತಾಳಪೂಜೆ ನಡೆಯಲಿದೆ. ಮೇ.1ರಂದು ಬೆಳಿಗ್ಗೆ ಗಣಪತಿ ಹವನ, ನವಕ ಕಲಶಾಭಿಷೇಕ, ನಾಗತಂಬಿಲ, ಶಿವಪೂಜೆ, ಮಧ್ಯಾಹ್ನ ಮಹಾಪೂಜೆ, ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ರಾತ್ರಿ ರಂಗಪೂಜೋತ್ಸವ, ಉತ್ಸವ ಬಲಿ, ಕಟ್ಟೆಪೂಜೆ, ದೇವರ ಸವಾರಿ, ವಸಂತೋತ್ಸವ, ಮಂತ್ರಾಕ್ಷತೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.