ಪುತ್ತೂರು : ಆರ್.ಎಸ್. ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚೊಚ್ಚಲ ಕನ್ನಡ ಅಮ್ಮ ಆಲ್ಬಂ ಸಾಂಗ್ಗೆ ನಂದಾವರದ ಶ್ರೀವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಮುಹೂರ್ತ ನಡೆಯಿತು. ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ನಿರ್ದೇಶಕ ಪುತ್ತೂರಿನ ಪ್ರಜ್ವಲ್ ಕರ್ಪೆರವರು ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ಚಂದ್ರು ಕಬ್ಬಳರವರ ನಿರ್ಮಾಣ ಮಾಡಿರುವ ಆಲ್ಬಮ್ ಹಾಡಿಗೆ ರಮ್ಯಶ್ರೀರವರು ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಸುಪ್ರೀತ್ ಪುತ್ತೂರುರವರ ಛಾಯಾಗ್ರಹಣ, ಪ್ರಸಿದ್ಧ ಮೇಕಪ್ ಆರ್ಟಿಸ್ಟ್ಗಳಾದ ವೆಂಕಟೇಶ್ ಮತ್ತು ಕಾಳಿದಾಸರವರು ಮೇಕಪ್ ಮಾಡಿರುತ್ತಾರೆ. ಕನ್ನಡ ಹಾಗೂ ಮಳಯಾಲಂ ನಟಿ ಸುಚಿತಾ ರೈ, ಲೋಲಾಕ್ಷಿ ಆಚಾರ್ಯರವರು ನಟಿಸಿದ್ದಾರೆ. ಸಿಂಧಿಯಾ ಡಿಸೋಜರವರ ಸಾಹಿತ್ಯ ಹಾಗೂ ಗಾಯನ ಮತ್ತು ಅವಿನಾಶ್ ಅಹಿಂಸಾ, ಪ್ರಜ್ವಲ್ ಕರ್ಪೆ, ಶರಣ್ ಸಚ್ಚೇರಿಪೇಟೆ ಹಾಗೂ ವಿನೋದ್ ಪುತ್ತೂರುರವರ ಮಾರ್ಗದರ್ಶನದಲ್ಲಿ ಕೆಲವೇ ದಿನಗಳಲ್ಲಿ ಈ ಆಲ್ಬಂ ಸಾಂಗ್ ಬಿಡುಗಡೆಗೊಳ್ಳಲಿದೆ.