- ಸ್ಪರ್ಧಾತ್ಮಕ ದರ, ಉತ್ತಮ ಗುಣಮಟ್ಟದ ವಸ್ತುಗಳಿಗೆ ಮೋರ್ ಹೆಸರುವಾಸಿ
ಪುತ್ತೂರು: ಮೋರ್ ಶಾಪಿಂಗ್ ಮಾಲ್ ಈಗ ಪುತ್ತೂರಿನ ಗ್ರಾಹಕರ ಸೇವೆಗೆ ಸಿದ್ದಗೊಂಡಿದ್ದು ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಎದುರು ಭಾಗದಲ್ಲಿರುವ ಕೇಶವ ಶಾಪಿಂಗ್ ಸೆಂಟರ್ನಲ್ಲಿ ಮೋರ್ ಸೂಪರ್ ಮಾರ್ಕೆಟ್ ಎ.30 ರಂದು ಶುಭಾರಂಭಗೊಂಡಿತು. ಶಾಸಕ ಸಂಜೀವ ಮಠಂದೂರುರವರು ನೂತನ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ದೇಶದ ನಾಗರಿಕರ ಆರ್ಥಿಕ ಸ್ಥಿತಿಯು ಸುಧಾರಿಸುತ್ತಿದ್ದು ಆ ಮೂಲಕ ದೇಶದಲ್ಲಿ ಅಮೂಲಾಗ್ರ ಬದಲಾವಣೆ ಆಗುತ್ತಿದೆ ಎಂದು ಹೇಳಿದರು. ಪೇಟೆ ಪಟ್ಣಗಳಲ್ಲಿ ಸಿಗುವ ವಸ್ತುಗಳು ಹಳ್ಳಿ ಪ್ರದೇಶದಲ್ಲಿ ಒಂದೇ ಸೂರಿನಡಿ ಸಿಗುವಂತಾಗುತ್ತಿದ್ದು ಹಳ್ಳಿಯು ಪೇಟೆಯ ವಾತಾವರಣಕ್ಕೆ ಬದಲಾವಣೆ ಆಗುತ್ತಿದ್ದು ಮೊದಲ ಹೆಜ್ಜೆಯಾಗಿದೆ ಎಂದರು.
ಮಹಾನಗರಗಳಲ್ಲಿ ಸಿಗುವ ವಸ್ತುಗಳು ಹಳ್ಳಿ ಪ್ರದೇಶಕ್ಕೆ ಬಂದಾಗ ಸಾಮಾನ್ಯ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದರು. ಇಲ್ಲಿ ಮೋರ್ನ ಎರಡನೇ ಸಂಸ್ಥೆಯು ಆರಂಭಗೊಂಡಿದ್ದು ಇದು ಎಲ್ಲಾ ಕಡೆಗಳಿಗಿಂತಲೂ ಸ್ಪರ್ಧಾತ್ಮಕ ದರ ಹಾಗೂ ಉತ್ತಮ ಗುಣಮಟ್ಟದ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಈ ಸಂಸ್ಥೆಯು ಎಲ್ಲರ ಪ್ರೀತಿ ವಿಶ್ವಾಸ ಗಳಿಸುವ ಮೂಲಕ ಉತ್ತರೋತ್ತರ ಬೆಳೆಯಲಿ ಎಂದು ಹೇಳಿ ಶುಭಹಾರೈಸಿದರು. ಕಾರ್ಯಕ್ರದ ಮೊದಲು ಕಟ್ಟಡ ಮಾಲಕ ಅಜಿತ್ ನಾಯಕ್ ಮತ್ತು ಅಪರ್ಣ ನಾಯಕ್ ದಂಪತಿ, ಪ್ರಕಾಶ್ ನಾಯಕ್ ಮತ್ತು ಶ್ಯಮಲಾ ನಾಯಕ್ ದಂಪತಿರವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಮೋರ್ನ ಸಿಟಿ ವ್ಯವಸ್ಥಾಪಕ ನಂಜು ಚಿಂಗಪ್ಪ ಸ್ವಾಗತಿಸಿದರು. ಸಂಸ್ಥೆಯ ಮೇಲ್ವಿಚಾರಕರುಗಳಾದ ಮಂಜುನಾಥ, ವಿಶ್ವನಾಥ, ಜಾನ್ಪಾಲ್, ಮಲ್ಲಿಕಾರ್ಜುನ, ಶ್ರುತೀನ್, ಪವನ್ ಸಹಕರಿಸಿದರು.
ಪ್ರಾರಂಭೋತ್ಸವದ ವಿಶೇಷತೆಗಳು
ರೂ 499 ಮತ್ತು ಮೇಲ್ಪಟ್ಟ ಖರೀದಿಗೆ 1 ಕೆ.ಜಿ ಸಕ್ಕರೆ ೩ ರೂಪಾಯಿಗೆ ದೊರೆಯಲಿದೆ. ರೂ.1999 ಮೌಲ್ಯಕ್ಕಿಂತ ಅಧಿಕ ಖರೀದಿಸುವ ಗ್ರಾಹಕರಿಗೆ 225ರೂ ಮೌಲ್ಯದ ಸ್ವಸ್ತಿಕ್ 2 ಪೀಸ್ ಕಂಟೈನರ್ ಕೇವಲ 15 ರೂಪಾಯಿಗೆ ದೊರೆಯುತ್ತದೆ. 3999 ರೂಪಾಯಿ ಮೇಲ್ಪಟ್ಟು ಖರೀದಿಸಿದ ಗ್ರಾಹಕರಿಗೆ 795 ರೂ. ಮೌಲ್ಯದ 3 ಲೀಟರ್ನ ಪ್ರೆಷರ್ ಕುಕ್ಕರ್ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.