ಶಿಕ್ಷಕ ಲಕ್ಷ್ಮೀಕಾಂತ ಪುಣಿಂಚತ್ತಾಯರವರಿಗೆ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ

0

ಪುತ್ತೂರು : ಎಚ್.ಎ.ಯು.ಪಿ.ಎಸ್. ಚಿಪ್ಪಾರ್ ಶಾಲಾ ಶಿಕ್ಷಕ ಲಕ್ಷ್ಮೀಕಾಂತ ಪುಣಿಂಚತ್ತಾಯರವರು ಕಟೀಲು ಶ್ರೀದುರ್ಗಾ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ನಾಗರಾಜ ಬಿ.ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಪುರಾಣಗಳಲ್ಲಿ ಭಕ್ತಿ ಒಂದು ಅಧ್ಯಯನ” ಈ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯದ ೪೦ನೇ ಘಟಿಕೋತ್ಸವದ ಸಂದರ್ಭದಲ್ಲಿ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯರವರು ಪದವಿ ನೀಡಿ ಗೌರವಿಸಿದರು. ಇವರು ಪಡ್ನೂರು ಕುಂಜಾರು ನಿವಾಸಿ ದಿ.ರಾಜಗೋಪಾಲ ಪುಣಿಂಚತ್ತಾಯ ಪಿ. ಮತ್ತು ಪಿ.ಆರ್.ಸರೋಜರವರ ಪುತ್ರ.

 

LEAVE A REPLY

Please enter your comment!
Please enter your name here